Webdunia - Bharat's app for daily news and videos

Install App

ಕರುಣ್ ನಾಯರ್ ಯಶಸ್ಸಿಗೆ ಕಾರಣ ಇವರಂತೆ

Webdunia
ಮಂಗಳವಾರ, 20 ಡಿಸೆಂಬರ್ 2016 (11:07 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಗಳಿಸಿದ ಕರುಣ್ ನಾಯರ್ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.  ಕರುಣ್ ನಾಯರ್ ಇಷ್ಟೊಂದು ಯಶಸ್ಸು ಕಾಣಲು ಕಾರಣ ಯಾರು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.

“ತ್ರಿಶತಕ ಭಾರಿಸಿದ ಕರುಣ್ ನಾಯರ್ ಗೆ ಅಭಿನಂದನೆಗಳು. ಇದಕ್ಕೆಲ್ಲಾ ಕಾರಣ ರಾಹುಲ್ ದ್ರಾವಿಡ್. ಎ ತಂಡದ ಕೋಚ್ ಆಗಿರುವ ದ್ರಾವಿಡ್ ಯುವ ಆಟಗಾರರನ್ನು ಉತ್ತಮವಾಗಿ ತಯಾರು ಮಾಡುತ್ತಿದ್ದಾರೆ. ಅವರ ಕಠಿಣ ಪರಿಶ್ರಮದ ಫಲವೇ ಈ ಯುವ ಆಟಗಾರರ ಯಶಸ್ಸು” ಎಂದು ಠಾಕೂರ್ ಹೊಗಳಿದ್ದಾರೆ.

ಸುನಿಲ್ ಗವಾಸ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡಾ ಕರುಣ್ ಯಶಸ್ಸಿಗೆ ದ್ರಾವಿಡ್ ರನ್ನು ಹೊಗಳಿದ್ದಾರೆ. ದ್ರಾವಿಡ್ ಯಂಗ್ ಟ್ಯಾಲೆಂಟ್ ಗಳನ್ನು ಉತ್ತಮವಾಗಿ ತರಬೇತುಗೊಳಿಸಿದ್ದಾರೆ. ಅದರ ಪರಿಣಾಮವೇ ಈ ಯಶಸ್ಸು ಎಂದು ಲಕ್ಷ್ಮಣ್ ಹೇಳಿದ್ದಾರೆ.

ಇನ್ನೊಂದೆಡೆ ಗವಾಸ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆ ಎಲ್ ರಾಹುಲ್ ಮತ್ತು ಕರುಣ್ ನಾಯರ್ ಜೋಡಿಯನ್ನು ರಾಹುಲ್ ದ್ರಾವಿಡ್ ಮತ್ತು ಗುಂಡಪ್ಪ ವಿಶ್ವನಾಥ್ ಗೆ ಹೋಲಿಸಿದ್ದಾರೆ. ವಿಶೇಷವಾಗಿ ಕರುಣ್ ಗೆ ಅಭಿನಂದಿಸಿದ ಗವಾಸ್ಕರ್, ಮುಂದೊಂದು ದಿನ ಆತ ಭಾರತ ತಂಡಕ್ಕೆ ಇನ್ನಷ್ಟು ರನ್ ಗಳಿಸಿಕೊಡಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ ಸೌರಬ್ ಗಂಗೂಲಿ, ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಮುಂದಿನ ಸುದ್ದಿ
Show comments