ವಿವಾದಿತ ಟ್ವೀಟ್ ಮಾಡಿ ಅಳಿಸಿ ಹಾಕಿದ ಹರ್ಭಜನ್ ಸಿಂಗ್! ಅಂತಹದ್ದೇನಿತ್ತು ಅದರಲ್ಲಿ?

Webdunia
ಭಾನುವಾರ, 8 ಜನವರಿ 2017 (06:47 IST)
ಮುಂಬೈ: ಹರ್ಭಜನ್ ಸಿಂಗ್ ಯಾವತ್ತೂ ನೇರ ನುಡಿಗೆ ಹೆಸರು ವಾಸಿ. ಪಿಚ್ ವಿಷಯದಲ್ಲಿ ಹಿಂದೊಮ್ಮೆ ಟೀಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಭಜಿ ಇದೀಗ ಆಯ್ಕೆ ಸಮಿತಿ ವಿರುದ್ಧವೇ ಟೀಕೆ ಮಾಡುವ ಟ್ವೀಟ್ ಮಾಡಿ ವಿವಾದವಾಗುವ ಲಕ್ಷಣವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.

ನಿನ್ನೆಯಷ್ಟೇ ಇಂಗ್ಲೆಂಡ್ ಸರಣಿಗೆ ಘೋಷಿಸಲಾದ ತಂಡದಲ್ಲಿ ಟೆಸ್ಟ್ ನಲ್ಲಿ ತ್ರಿಶತಕ ಭಾರಿಸಿದ್ದ ಕರುಣ್ ನಾಯರ್ ಹೆಸರಿಲ್ಲದಿದ್ದಕ್ಕೆ ಭಜಿ ಆಯ್ಕೆ ಸಮಿತಿಯನ್ನು ಲೇವಡಿ ಮಾಡುವಂತಹ ಟ್ವೀಟ್ ಮಾಡಿದ್ದರು. “ಎಲ್ಲಿ ಕರುಣ್ ನಾಯರ್? ಇಂಗ್ಲೆಂಡ್ ವಿರುದ್ಧ ಈಗಷ್ಟೇ ತ್ರಿಶತಕ ಭಾರಿಸಿದಾತ.. ಏಕದಿನ ಸರಣಿ ಬಿಡಿ. ಅಭ್ಯಾಸ ಪಂದ್ಯದಲ್ಲೂ ಆತನ ಹೆಸರು ಕಾಣುತ್ತಿಲ್ಲವಲ್ಲ? ಕಮಾಲ್…” ಎಂದು ಟ್ವೀಟ್ ಮಾಡಿದ್ದರು.

ಇದು ವಿವಾದವಾಗುವ ಲಕ್ಷಣ ಕಾಣುತ್ತಿದ್ದಂತೆ ತಕ್ಷಣ ಅದನ್ನು ಡಿಲೀಟ್ ಮಾಡಿದರು. ಆದರೆ ಆಗಲೇ ಆ ಟ್ವೀಟ್ ನನ್ನು 44 ಜನ ರಿಟ್ವೀಟ್ ಮಾಡಿದ್ದರು. ಹಿರಿಯ ಸ್ಪಿನ್ನರ್ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದಿಲ್ಲ. ರಣಜಿ ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಆದರೂ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ. ಬಹುಶಃ ಈ ಅಸಮಧಾನವನ್ನು ಈ ರೀತಿ ಹೊರ ಹಾಕುತ್ತಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

IND vs ENG: ಈ ಲೈನ್ ಚೆನ್ನಾಗಿದೆ ಮಗಾ.. ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಕನ್ನಡ ಕಲರವ Video

ಫಿಫಾ ವಿಶ್ವಕಪ್‌ 2026: ಈ ದಿನದಂದು ಬೆಂಗಳೂರಿನ ಹೊಟೇಲ್‌, ರೆಸ್ಟೋರೆಂಟ್‌ಗಳ ಸೇವೆ ಸಮಯದಲ್ಲಿ ಬದಲಾವಣೆ

ಮುಂದಿನ ಸುದ್ದಿ
Show comments