Webdunia - Bharat's app for daily news and videos

Install App

ವಿರಾಟ್ ಕೊಹ್ಲಿಗೆ ಅಭಿಮಾನಿಗಳ ತಪರಾಕಿ

Webdunia
ಸೋಮವಾರ, 3 ಜುಲೈ 2017 (09:33 IST)
ನವದೆಹಲಿ: ಪ್ರತಿಭಾವಂತ ರಿಷಬ್ ಪಂತ್ ರನ್ನು ಆಡಿಸುತ್ತೇನೆಂದು ಆಸೆ ತೋರಿಸುತ್ತಾರೆಯೇ ವಿನಹ ಇನ್ನೂ ತಂಡದೊಳಕ್ಕೆ ಸೇರಿಸಿಕೊಳ್ಳುವ ಯೋಚನೆಯೇ ಮಾಡದ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಸರಿಯಾಗಿಯೇ ಜಾಡಿಸಿದ್ದಾರೆ.


ಸದ್ಯಕ್ಕೆ ಕೋಚ್ ಇಲ್ಲದ ಟೀಂ ಇಂಡಿಯಾಕ್ಕೆ ಕೊಹ್ಲಿಯೇ ಬಾಸ್. ಹಾಗಾಗಿ ತಂಡದ ಸಂಪೂರ್ಣ ಹೊಣೆ ಅವರದ್ದು. ನಿನ್ನೆಯ ಪಂದ್ಯದಲ್ಲಿ ಸೋತ ಮೇಲಂತೂ ಅಭಿಮಾನಿಗಳ ಸಿಟ್ಟು ನೆತ್ತಿಗೇರಿದೆ. ನಿನ್ನೆ ಗೆದ್ದಿದ್ದರೆ ಸರಣಿ ಗೆಲ್ಲಬಹುದಾಗಿತ್ತು. ಆದರೆ ತೃತೀಯ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದ ಕೊಹ್ಲಿ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೃತೀಯ ಪಂದ್ಯದಲ್ಲೇ ರಿಷಬ್ ಪಂತ್ ರನ್ನು ಆಡಿಸಬಹುದೆಂದು ಕಾದಿದ್ದ ಅಭಿಮಾನಿಗಳು ನಾಲ್ಕನೇ ಪಂದ್ಯದಲ್ಲೂ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೆ ಅವಕಾಶ ನೀಡದೇ ಇರುವುದಕ್ಕೆ ಜಾಡಿಸಿದ್ದಾರೆ. ಟಾಸ್ ಆದ ಮೇಲೆ ಆಡುವ ಹನ್ನೊಂದರ ಬಳಗ ಘೋಷಣೆಯಾದ ಕೂಡಲೇ ಟ್ವಿಟರ್ ನಲ್ಲಿ ಕೊಹ್ಲಿ ವಿರುದ್ಧ ಅಭಿಮಾನಿಗಳು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಸಮಸ್ಯೆಯೇನು ಕೊಹ್ಲಿ? ಯಾಕೆ ಪ್ರತಿಭಾವಂತ ರಿಷಬ್ ರನ್ನು ಆಡಿಸಿಲ್ಲ? ರಿಷಬ್ ಇನ್ನೆಷ್ಟು ದಿನ ಕಾಯಬೇಕು? ಅವರಿಗೆ ಒಂದೇ ಒಂದು ಚಾನ್ಸ್ ಕೊಡಲ್ವಾ ಎಂದು ಕೊಹ್ಲಿಯನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

ಮೊಹಮ್ಮದ್ ಸಿರಾಜ್ ಯಾರ್ಕರ್ ನಿಂದ ಇವರೆಲ್ಲರ ವೃತ್ತಿ ಜೀವನ ಬಚಾವ್ ಆಯ್ತು

ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

IND vs ENG: ಆ ಒಂದು ಯಾರ್ಕರ್ ಮೊಹಮ್ಮದ್ ಸಿರಾಜ್ ಜೀವನದಲ್ಲೇ ಮರೆಯಲ್ಲ: video

IND vs ENG: ಗೌತಮ್ ಗಂಭೀರ್ ಗೆ ಅಹಂ ಜಾಸ್ತಿಯಾಯ್ತು, ಇಲ್ಲಾಂದ್ರೆ ಹೀಗೆ ಮಾಡ್ತಿದ್ರಾ

ಮುಂದಿನ ಸುದ್ದಿ
Show comments