Webdunia - Bharat's app for daily news and videos

Install App

ಗಾಯ ಮುಚ್ಚಿಟ್ಟು ಸೇನೆ ಸೇರಿಕೊಂಡಿದ್ದ ಧೋನಿ!

Webdunia
ಬುಧವಾರ, 14 ಆಗಸ್ಟ್ 2019 (08:59 IST)
ನವದೆಹಲಿ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಹಲವು ಬಾರಿ ಗಾಯಗೊಂಡಿದ್ದರೂ ತಂಡಕ್ಕಾಗಿ ಅದನ್ನು ಮರೆತು ಪಂದ್ಯವಾಡಿದ ಹಲವು ಉದಾಹರಣೆಗಳಿವೆ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. ಇದೀಗ  ಧೋನಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿಯೂ ಅದನ್ನೇ ಮಾಡಿದ್ದಾರಂತೆ.


ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಧೋನಿ ಕೈ ಬೆರಳಿಗೆ ಗಾಯ ಮಾಡಿಕೊಂಡು ರಕ್ತ ಉಗುಳುತ್ತಿದ್ದ ಫೋಟೋಗಳು ವೈರಲ್ ಆಗಿತ್ತು. ಆಗ ಟೀಂ ಇಂಡಿಯಾ ಮೂಲಗಳು ಧೋನಿ ಗಾಯದ ಬಗ್ಗೆ ತುಟಿಪಿಟಕ್ ಎಂದಿರಲಿಲ್ಲ. ಆದರೆ ಧೋನಿ ಬೆರಳು ಮುರಿತಕ್ಕೊಳಗಾಗಿದ್ದರು ಎನ್ನಲಾಗಿದೆ. ಆದರೆ ವಿಶ್ವಕಪ್ ನ ಮುಂದಿನ ಪಂದ್ಯಗಳು ಮತ್ತು ನಂತರ ಸೇನೆ ಸೇರಲು ಅನರ್ಹ ಎಂದು ಎನಿಸಿಕೊಳ್ಳದೇ ಇರಲು ಧೋನಿ ಗಾಯ ಮುಚ್ಚಿಟ್ಟಿದ್ದರು ಎಂಬ ಅಂಶವನ್ನು ಆಂಗ್ಲ ಮಾಧ್ಯಮಗಳು ಬಹಿರಂಗಗೊಳಿಸಿವೆ.

ಧೋನಿಗೆ ಬೆರಳು ಮಡಚಲೂ ಆಗದಷ್ಟು ನೋವಿದ್ದರೂ ವೈದ್ಯರ ಬಳಿ ಹೋದರೆ ವಿಷಯ ಬಹಿರಂಗವಾಗಬಹುದು ಎಂದು ಮುಚ್ಚಿಟ್ಟಿದ್ದರಂತೆ. ಒಂದು ವೇಳೆ ಬೆರಳಿಗೆ ಗಾಯವಾಗಿದೆಯೆಂದಾಗಿದ್ದರೆ, ಅವರು ಸೇನೆಯಲ್ಲಿ ತರಬೇತಿ ಪಡೆಯಲು ಅನರ್ಹರಾಗಿರುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ಯೋಧನಾಗಿ ಕರ್ತವ್ಯ ನಿಭಾಯಿಸುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡದ ಧೋನಿ ಇದನ್ನೆಲ್ಲಾ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

IND vs ENG: ಟೀಂ ಇಂಡಿಯಾಗೆ ಬಿಗ್ ಶಾಕ್, ರಿಷಭ್ ಪಂತ್ ಸರಣಿಯಿಂದಲೇ ಔಟ್

ಬ್ರೇಕ್ ನಲ್ಲೂ ಪೆವಿಲಿಯನ್ ನಲ್ಲಿ ಸಾಯಿ ಸುದರ್ಶನ್ ಗೆ ಇದೆಂಥಾ ಅಭ್ಯಾಸ

ಕರುಣ್ ನಾಯರ್ ವೃತ್ತಿ ಜೀವನ ಇಲ್ಲಿಗೇ ಕೊನೆಯಾಯ್ತಾ

ಮುಂದಿನ ಸುದ್ದಿ
Show comments