Webdunia - Bharat's app for daily news and videos

Install App

ರೈಲು ಯಾನದಲ್ಲಿ ಧೋನಿ ಹೇಗೆ ಕಾಲ ಕಳೆದರು ಗೊತ್ತಾ?

Webdunia
ಶುಕ್ರವಾರ, 24 ಫೆಬ್ರವರಿ 2017 (08:02 IST)
ರಾಂಚಿ: ಸದಾ ವಿಮಾನದಲ್ಲಿ ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಓಡಾಡುವ ಕ್ರಿಕೆಟಿಗರ ಪೈಕಿ ಧೋನಿ ಇತ್ತೀಚೆಗೆ ರೈಲಿನಲ್ಲಿ ಪ್ರಯಾಣ ಮಾಡಿ ಸುದ್ದಿ ಮಾಡಿದ್ದರು. ವಿಜಯ್ ಹಜಾರೆ ಟ್ರೋಫಿ ಆಡುವ ಜಾರ್ಖಂಡ್ ತಂಡದೊಂದಿಗೆ ಕೋಲ್ಕೊತ್ತಾಗೆ ರೈಲು ಪ್ರಯಾಣ ಮಾಡಿದ ಧೋನಿ ಕುರಿತು ಸ್ವಾರಸ್ಯಕರ ವಿವರಗಳು ಈಗ ಒಂದೊಂದಾಗಿ ಹೊರಬೀಳುತ್ತಿದೆ.

 
ರಾಂಚಿಯಲ್ಲಿ ಧೋನಿ ರೈಲು ಹತ್ತುತ್ತಿದ್ದಾರೆಂದಾಗಲೇ ಜನ ಅವರನ್ನು ನೋಡಲು ಮುಗಿಬಿದ್ದಿದ್ದರಂತೆ. ಇದು ಧೋನಿಯದೇಆಯ್ಕೆಯಾಗಿತ್ತು. ವಿಮಾನ ಟಿಕೆಟ್ ತಾವೇ ಬೇಡವೆಂದು ನಿರಾಕರಿಸಿದ್ದರು. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ನಗು ನಗುತ್ತಲೇ ಕೈ ಬೀಸಿದರಂತೆ ಧೋನಿ.

ಕೆಲವು ವರ್ಷಗಳ ಹಿಂದೆ ಇದೇ ರೈಲ್ವೇಯಲ್ಲಿ ಕೆಲಸ ಮಾಡಿದ್ದ ಧೋನಿ ತಮ್ಮ ಜತೆ ಕೆಲಸ ಮಾಡಿದವರೆನ್ನೆಲ್ಲಾ ಹೆಸರು ಕೂಗಿ ಮಾತನಾಡಿಸಿದರು. ರೈಲು ಹತ್ತಿದ ಮೇಲೆ ತಡರಾತ್ರಿವರೆಗೂ ನಿದ್ದೆ ಮಾಡದೇ ಸಹ ಆಟಗಾರರೊಂದಿಗೆ ಮಾತನಾಡುತ್ತಾ, ತಮ್ಮ ಜತೆ ಸೆಲ್ಫೀ ತೆಗೆಯಲು ಬಯಸಿದ ಅಭಿಮಾನಿಗಳು, ತಿಂಡಿ ಸರಬರಾಜುದಾರರೊಂದಿಗೆ ಕಾಲ ಕಳೆದರು.

ಬೇಕೆನಿಸಿದಾಗಲೊಮ್ಮೆ ರೈಲಿನಿಂದ ಕೆಳಗಿಳಿದು ಚಹಾ ಸೇವಿಸಿ ಪಕ್ಕಾ ಸಾಮಾನ್ಯ ಪ್ರಯಾಣಿಕನಂತೆ ಖುಷಿಪಟ್ಟರು ಎಂದು ತಂಡದ ಮೂಲಗಳು ಹೇಳಿವೆ. ಅಂತೂ ಕ್ರಿಕೆಟ್ ಮೈದಾನದಲ್ಲಿ ಪ್ರಯೋಗ ಮಾಡುವ ಧೋನಿ ಇಲ್ಲೂ ತಮಗೆ ತೋಚಿದ್ದನ್ನೆಲ್ಲಾ ಮಾಡಿ ಸಾಮಾನ್ಯನ ಜೀವನದ ಖುಷಿ ಪಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments