Webdunia - Bharat's app for daily news and videos

Install App

ಮತ ಚಲಾಯಿಸಲು ದುಬೈನಿಂದ ರಾಜಕೋಟ್‌ಗೆ ಬಂದ ಚೇತೇಶ್ವರ್ ಪೂಜಾರ್

Webdunia
ಬುಧವಾರ, 30 ಏಪ್ರಿಲ್ 2014 (14:30 IST)
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡುತ್ತಿರುವ ಕ್ರಿಕೆಟಿಗ ಚೇತೇಶ್ವರ ಪೂಜಾರ್ ಮತ ಚಲಾಯಿಸುವುದಕ್ಕಾಗಿ ಸ್ವದೇಶಕ್ಕೆ ಆಗಮಿಸುವುದರ ಮೂಲಕ ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಇಂದೇ ಅವರು ದುಬಾಯಿಗೆ ಹಿಂತಿರುಗಲಿದ್ದಾರೆ.
 
ಮೂಲತಃ ರಾಜಕೋಟ್ ನಗರದವರಾದ ಅವರನ್ನು ರಾಜ್ಯ ಚುನಾವಣಾ ಆಯೋಗ ತನ್ನ "ಐಕಾನ್" ಮತ್ತು ರಾಜಕೋಟ್ ಜಿಲ್ಲೆಯ ಸಂಸದೀಯ ಚುನಾವಣೆಗಳ "ರಾಯಭಾರಿ" ಯಾಗಿ ಘೋಷಿಸಿದೆ. 
 
ತಮ್ಮ ಮತವನ್ನು ಚಲಾಯಿಸಲು ಅಷ್ಟು ದೂರದಿಂದ ಬಂದಿರುವ ಪೂಜಾರ್ ಉತ್ಸಾಹವನ್ನು ಕೊಂಡಾಡಿರುವ ರಾಜಕೋಟ್ ಜಿಲ್ಲಾಧಿಕಾರಿ ಈ ಮೂಲಕ ಅವರು ಇತರರಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.
 
ಮತ ಚಲಾಯಿಸಿದ ನಂತರ ವರದಿಗಾರರ ಜತೆ ಮಾತನಾಡುತ್ತಿದ್ದ ಪೂಜಾರ್ "ಹೊಸ ಸರ್ಕಾರವನ್ನು ರಚಿಸಲು ಮತ ಚಲಾಯಿಸುವುದು ಎಲ್ಲರ ಕರ್ತವ್ಯ. ತಮ್ಮ ಅಮೂಲ್ಯ ಸಮಯವನ್ನು ಮತ ಚಲಾಯಿಸಲು ವ್ಯಯಿಸಿ ಎಂದು ನಾನು ಯುವಕರಲ್ಲಿ ಮತ್ತು ಹಿರಿಯರಲ್ಲಿ ಕೇಳಿಕೊಳ್ಳುತ್ತೇನೆ" ತಿಳಿಸಿದರು. ಈ ಸಂದರ್ಭದಲ್ಲಿ ಪತ್ನಿ ಪೂಜಾ ಅವರಿಗೆ ಸಾಥ್ ನೀಡಿದರು. 
 
ಪೂಜಾರ್ ಅವರ ಮನವಿ ಮತದಾರರಿಗೆ ಸ್ಪೂರ್ತಿ ನೀಡಲಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ರಾಜಕೋಟ್ ಜಿಲ್ಲಾಧಿಕಾರಿ ಭರವಸೆ ವ್ಯಕ್ತ ಪಡಿಸಿದ್ದಾರೆ. ಸೌರಾಷ್ಟ್ರ ವಿಭಾಗದಲ್ಲಿ 7 ಲೋಕಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments