Webdunia - Bharat's app for daily news and videos

Install App

ಬ್ಯಾಟಿಂಗ್ ಯಶಸ್ಸಿಗೆ ಕೋಚ್ ಅನಿಲ್ ಕುಂಬ್ಳೆ ಕಾರಣ ಎಂದ ಚೇತೇಶ್ವರ ಪೂಜಾರ

Webdunia
ಶುಕ್ರವಾರ, 18 ನವೆಂಬರ್ 2016 (09:49 IST)
ವಿಶಾಖಪಟ್ಟಣಂ: ಸತತ ಮೂರು ಶತಕಗಳು, ಮೂರು ಅರ್ಧಶತಕಗಳು.. ಚೇತೇಶ್ವರ ಪೂಜಾರ ಬೆಸ್ಟ್ ಫಾರ್ಮ್ ನಲ್ಲಿದ್ದಾರೆ. ಇದಕ್ಕೆಲ್ಲಾ ತಮ್ಮ ಸ್ಥಿರತೆಯ ಮೇಲೆ ಹೆಚ್ಚು ಗಮನಕೊಡಲು ಹೇಳಿದ ಕೋಚ್ ಅನಿಲ್ ಕುಂಬ್ಳೆಯ ಸಲಹೆಯೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

“ನಾನು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ, ದೊಡ್ಡ ಮೊತ್ತ ಗಳಿಸಲು ವಿಫಲನಾಗುತ್ತಿದ್ದೆ. ಈ ಬಗ್ಗೆ ಅನಿಲ್ ಕುಂಬ್ಳೆ ಬಳಿ ಮಾತನಾಡಿದಾಗ, ನನ್ನ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸ್ಥಿರತೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಹೇಳಿದರು. ಹಾಗೆ ಮಾಡಿದ ಮೇಲೆ ನಾನು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿದೆ” ಎಂದು ನಿನ್ನೆ ಶತಕ ಗಳಿಸಿದ ಪೂಜಾರ ಹೇಳಿದರು.

ಆಟದಲ್ಲಿ ಅವರ ಯೋಜನೆ ಬದಲಾದುದರ ಪರಿಣಾಮ ನಿನ್ನೆಯೇ ಗೊತ್ತಾಗಿತ್ತು. ರಾಹುಲ್ ದ್ರಾವಿಡ್ ನ ಪ್ರತಿರೂಪದಂತೆ ಆಡುವ ಪೂಜಾರ ನಿನ್ನೆ ಸಿಕ್ಸ್ ಬಾರಿಸುವ ಮೂಲಕ ಶತಕ ಪೂರ್ತಿಗೊಳಿಸಿ ಅಚ್ಚರಿ ಮೂಡಿಸಿದ್ದರು.

ಇದೇ ವೇಳೆ ವಿರಾಟ್ ಕೊಹ್ಲಿ ಜತೆ ಬ್ಯಾಟಿಂಗ್ ಮಾಡುವಾಗ ಮೊದಲ ಅವಧಿಯಲ್ಲಿ ರನೌಟ್ ಆಗುವ ಅಪಾಯಕ್ಕೆ ಒಳಗಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ “ನಮ್ಮ ನಡುವೆ ಸಂವಹನದ ಕೊರತೆಯಿರಲಿಲ್ಲ. ಆದರೆ ಬಾಲ್ ನಿರ್ಣಯಿಸುವಲ್ಲಿ ಎಡವಿದೆವು. ಊಟದ ವಿರಾಮದಲ್ಲಿ ನಾವಿಬ್ಬರೂ ಈ ಬಗ್ಗೆ ಚರ್ಚಿಸಿದ ನಂತರ ರನ್ ಸರಾಗವಾಗಿ ಬಂತು” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments