Webdunia - Bharat's app for daily news and videos

Install App

‘ಸಚಿನ್ ತೆಂಡುಲ್ಕರ್ ಆರಾಧಿಸದ ಮೇಲೆ ನೀವೆಂಥಾ ಕ್ರಿಕೆಟ್ ಅಭಿಮಾನಿ?’

Webdunia
ಬುಧವಾರ, 21 ಜೂನ್ 2017 (10:15 IST)
ಲಂಡನ್: ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ನ ದೈವ ಎನ್ನುವುದರಲ್ಲಿ ಸಂಶಯವಿಲ್ಲ. ಇಂದಿನ ಎಲ್ಲಾ ಯುವ ಆಟಗಾರರಿಗೂ ಅವರೇ ಸ್ಪೂರ್ತಿ. ಅದನ್ನೇ ಹಾರ್ದಿಕ್ ಪಾಂಡ್ಯ ಕೂಡಾ ಹೇಳಿದ್ದಾರೆ.

 
ಸಚಿನ್ ತೆಂಡುಲ್ಕರ್ ರನ್ನು ಆರಾಧಿಸದಿದ್ದ ಮೇಲೆ ನೀವೆಂಥಾ ಕ್ರಿಕೆಟ್ ಅಭಿಮಾನಿ? ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ತಾವೀಗಲೂ ತೆಂಡುಲ್ಕರ್ ಭೇಟಿಯಾಗುವಾಗ ನರ್ವಸ್ ಆಗುತ್ತೇನೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆಲ್ ರೌಂಡರ್ ತಮ್ಮ ಮತ್ತು ಸಚಿನ್ ಭೇಟಿಯ ಕ್ಷಣವನ್ನು ಸಂದರ್ಶನದಲ್ಲಿ ಮೆಲುಕು ಹಾಕಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಗೆಟ್ ಟುಗೆದರ್ ಪಾರ್ಟಿಗೆ ತೆಂಡುಲ್ಕರ್ ಬಂದಿದ್ದರು. ನಾನು ತಿಂಡಿ ಪ್ಲೇಟ್ ಕೈಯಲ್ಲಿ ಹಿಡಿದುಕೊಂಡಿದ್ದೆ.

ಯಾರೋ ನನ್ನ ಹಿಂದಿನಿಂದ ಬಂದು ಬೆನ್ನು ತಟ್ಟಿ ಹಾಯ್ ಎಂದರು. ನೋಡಿದರೆ ಸಚಿನ್! ಅರೆ ಕ್ಷಣ ಕೈಯಲ್ಲಿದ್ದ ತಿಂಡಿ ತಟ್ಟೆಯನ್ನು ಪಕ್ಕಕ್ಕಿಟ್ಟು ಕೂತೆ. ಅವರು ನನ್ನಲ್ಲಿ ಇದೇ ಫಾರ್ಮ್ ಉಳಿಸಿಕೊಂಡರೆ ಇನ್ನು ಒಂದು ವರ್ಷದೊಳಗೆ ಟೀಂ ಇಂಡಿಯಾದಲ್ಲಿರುತ್ತೀಯಾ ಎಂದರು.

ಅಚ್ಚರಿಯೆಂದರೆ, ಅದಾಗಿ ಐದೇ ತಿಂಗಳಿಗೆ ನಾನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ ಎಂದು ಹಾರ್ದಿಕ್ ಪಾಂಡ್ಯ ತಮ್ಮ ಸಚಿನ್ ಅಭಿಮಾನವನ್ನು ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments