Select Your Language

Notifications

webdunia
webdunia
webdunia
webdunia

‘ಸಚಿನ್ ತೆಂಡುಲ್ಕರ್ ಆರಾಧಿಸದ ಮೇಲೆ ನೀವೆಂಥಾ ಕ್ರಿಕೆಟ್ ಅಭಿಮಾನಿ?’

‘ಸಚಿನ್ ತೆಂಡುಲ್ಕರ್ ಆರಾಧಿಸದ ಮೇಲೆ ನೀವೆಂಥಾ ಕ್ರಿಕೆಟ್ ಅಭಿಮಾನಿ?’
Mumbai , ಬುಧವಾರ, 21 ಜೂನ್ 2017 (10:15 IST)
ಲಂಡನ್: ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ನ ದೈವ ಎನ್ನುವುದರಲ್ಲಿ ಸಂಶಯವಿಲ್ಲ. ಇಂದಿನ ಎಲ್ಲಾ ಯುವ ಆಟಗಾರರಿಗೂ ಅವರೇ ಸ್ಪೂರ್ತಿ. ಅದನ್ನೇ ಹಾರ್ದಿಕ್ ಪಾಂಡ್ಯ ಕೂಡಾ ಹೇಳಿದ್ದಾರೆ.

 
ಸಚಿನ್ ತೆಂಡುಲ್ಕರ್ ರನ್ನು ಆರಾಧಿಸದಿದ್ದ ಮೇಲೆ ನೀವೆಂಥಾ ಕ್ರಿಕೆಟ್ ಅಭಿಮಾನಿ? ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ತಾವೀಗಲೂ ತೆಂಡುಲ್ಕರ್ ಭೇಟಿಯಾಗುವಾಗ ನರ್ವಸ್ ಆಗುತ್ತೇನೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆಲ್ ರೌಂಡರ್ ತಮ್ಮ ಮತ್ತು ಸಚಿನ್ ಭೇಟಿಯ ಕ್ಷಣವನ್ನು ಸಂದರ್ಶನದಲ್ಲಿ ಮೆಲುಕು ಹಾಕಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಗೆಟ್ ಟುಗೆದರ್ ಪಾರ್ಟಿಗೆ ತೆಂಡುಲ್ಕರ್ ಬಂದಿದ್ದರು. ನಾನು ತಿಂಡಿ ಪ್ಲೇಟ್ ಕೈಯಲ್ಲಿ ಹಿಡಿದುಕೊಂಡಿದ್ದೆ.

ಯಾರೋ ನನ್ನ ಹಿಂದಿನಿಂದ ಬಂದು ಬೆನ್ನು ತಟ್ಟಿ ಹಾಯ್ ಎಂದರು. ನೋಡಿದರೆ ಸಚಿನ್! ಅರೆ ಕ್ಷಣ ಕೈಯಲ್ಲಿದ್ದ ತಿಂಡಿ ತಟ್ಟೆಯನ್ನು ಪಕ್ಕಕ್ಕಿಟ್ಟು ಕೂತೆ. ಅವರು ನನ್ನಲ್ಲಿ ಇದೇ ಫಾರ್ಮ್ ಉಳಿಸಿಕೊಂಡರೆ ಇನ್ನು ಒಂದು ವರ್ಷದೊಳಗೆ ಟೀಂ ಇಂಡಿಯಾದಲ್ಲಿರುತ್ತೀಯಾ ಎಂದರು.

ಅಚ್ಚರಿಯೆಂದರೆ, ಅದಾಗಿ ಐದೇ ತಿಂಗಳಿಗೆ ನಾನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ ಎಂದು ಹಾರ್ದಿಕ್ ಪಾಂಡ್ಯ ತಮ್ಮ ಸಚಿನ್ ಅಭಿಮಾನವನ್ನು ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ತಂಡ ತೊರೆದ ರಾಬಿನ್ ಉತ್ತಪ್ಪ!