Webdunia - Bharat's app for daily news and videos

Install App

‘ತಂಡದಲ್ಲಿ ಅನಿಲ್ ಕುಂಬ್ಳೆ ಮೇಲಧಿಕಾರಿಯಾಗಲು ಬಯಸಿದ್ದರು’

Webdunia
ಶನಿವಾರ, 24 ಜೂನ್ 2017 (10:26 IST)
ಮುಂಬೈ: ಮಳೆ ಬಿಟ್ಟರೂ ಹನಿ ತಪ್ಪದು ಎನ್ನುತ್ತಾರಲ್ಲ? ಹಾಗೆಯೇ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಇಷ್ಟು ದಿನ ಕಳೆದರೂ, ಅನಿಲ್ ಕುಂಬ್ಳೆ ತಂಡದಲ್ಲಿ ಹೇಗಿದ್ದರು ಎನ್ನುವದರ ಬಗ್ಗೆ ಅಂತೆ ಕಂತೆಗಳು ನಿಂತಿಲ್ಲ.

 
ಇದೀಗ ಬಿಸಿಸಿಐ ಮೂಲವೊಂದು ಮಾಧ್ಯಮವೊಂದಕ್ಕೆ ಅನಿಲ್ ಕುಂಬ್ಳೆ ಎಲ್ಲಾ ವಿಷಯದಲ್ಲೂ ತಮ್ಮದೇ ಅಂತಿಮ ತೀರ್ಮಾನವಾಗಿರಬೇಕು ಎನ್ನುವಂತಿದ್ದರು. ಅಲ್ಲದೆ, ಮೇಲಧಿಕಾರಿಯಂತೆ ವರ್ತಿಸುತ್ತಿದ್ದರು. ಕೊಹ್ಲಿಯನ್ನೇ ಎಲ್ಲದಕ್ಕೂ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದಿರುವುದಾಗಿ ವರದಿಯಾಗಿದೆ.

ತಂಡದ ಆಯ್ಕೆ ವಿಷಯ ಗಂಗೂಲಿ, ದ್ರಾವಿಡ್, ಧೋನಿ ಕಾಲದಲ್ಲೂ ನಾಯಕರದ್ದೇ ಅಂತಿಮ ತೀರ್ಮಾನವಾಗಿರುತ್ತಿತ್ತು. ಅದುವೇ ಕೊಹ್ಲಿ ಕಾಲದಲ್ಲೂ ಮುಂದುವರಿದಿತ್ತು. ಆದರೆ ಕುಂಬ್ಳೆ ತಾವೇ ಅಂತಿಮ ಬಳಗದ ಆಯ್ಕೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದರು.

ಅವರು ನಾಯಕನಿಗೂ ಬೆಲೆ ಕೊಡದೆ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಅಲ್ಲದೆ, ಆಟಗಾರರ ಜತೆ ಕಠಿಣವಾಗಿ ನಡೆದುಕೊಳ್ಳುತ್ತಿದ್ದರು. ಇದು ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲ, ಅವರ ಜತೆ ಐಪಿಎಲ್ ಆಡಿದವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಲ್ಲದೆ ತಮ್ಮ ನಡುವಳಿಕೆಯನ್ನು ಅವರು ಒಪ್ಪುತ್ತಿರಲಿಲ್ಲ. ಏನೇ ತಪ್ಪಾಗಿದ್ದರೂ ಆಟಗಾರರಿಂದ ಎನ್ನುತ್ತಿದ್ದರು. ಇದೇ ಕಾರಣಕ್ಕೆ ಆಟಗಾರರಲ್ಲಿ ಅವರ ಬಗ್ಗೆ ಅಸಮಾಧಾನ ಮೂಡಲು ಶುರುವಾಯ್ತು. ಬಿಸಿಸಿಐನೊಂದಿಗೂ ಅವರ ನಡವಳಿಕೆ ಇದೇ ರೀತಿ ಕಡ್ಡಿ ಮುರಿದಂತೆ ಇರುತ್ತಿತ್ತು ಎಂದು ಬಿಸಿಸಿಐ ಮೂಲಗಳು ಮಾಧ್ಯಮವೊಂದಕ್ಕೆ ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments