Select Your Language

Notifications

webdunia
webdunia
webdunia
webdunia

ನನ್ನ ವಿರುದ್ಧ ಯಾವ ಸಾಕ್ಷಿಗಳಿವೆ: ರಾಜ್ ಕುಂದ್ರಾ ಪ್ರಶ್ನೆ

ನನ್ನ ವಿರುದ್ಧ ಯಾವ ಸಾಕ್ಷಿಗಳಿವೆ: ರಾಜ್ ಕುಂದ್ರಾ ಪ್ರಶ್ನೆ
ಮುಂಬೈ , ಶುಕ್ರವಾರ, 21 ನವೆಂಬರ್ 2014 (19:38 IST)
ರಾಜಸ್ಥಾನ ರಾಯಲ್ಸ್ ಮಾಲೀಕರಾಗಿದ್ದ ರಾಜ್ ಕುಂದ್ರಾ ಬುಕ್ಕಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಮುದ್ಗಲ್ ಸಮಿತಿಯ ವರದಿಯಲ್ಲಿ ಆರೋಪಿಸಿರುವ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಯಾವ ಮಾನದಂಡದ ಮೇಲೆ ನನ್ನನ್ನು ಕಳಂಕಿತರನ್ನಾಗಿ ಮಾಡಿದ್ದೀರಿ, ನನ್ನ ವಿರುದ್ಧ ಯಾವ ಸಾಕ್ಷಿಗಳಿವೆ ಎಂದು ಪ್ರಮಾಣಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಶ್ರೀನಿವಾಸನ್, ಮೇಯಪ್ಪನ್ ಮುಂತಾದವರನ್ನು ಆರೋಪಮುಕ್ತರನ್ನಾಗಿ ಮಾಡಿ ನನ್ನ ವಿರುದ್ಧ ಯಾವ ಆಧಾರದ ಮೇಲೆ ಆರೋಪ ಹೊರಿಸಿದ್ದಾರೆ ಎಂದು ರಾಜ್ ಕುಂದ್ರಾ ಪ್ರಮಾಣಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಮುದ್ಗಲ್ ಸಮಿತಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮ್ಯಾಚ್ ಫಿಕ್ಸಿಂಗ್‌ನಲ್ಲಿ  ಶ್ರೀನಿವಾಸನ್ ಯಾವುದೇ ಪಾತ್ರವಹಿಸಿಲ್ಲ ಎಂದು ವರದಿ ತಿಳಿಸಿದೆ. ಮೇಯಪ್ಪನ್ ವಿರುದ್ಧವೂ ಸಾಕ್ಷ್ಯಾಧಾರವಿಲ್ಲ ಎಂದು ತಿಳಿಸಿದೆ. ರಾಜ್ ಕುಂದ್ರಾ ಬುಕ್ಕಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ವರದಿಯಲ್ಲಿ ತಿಳಿಸಿದೆ. 

Share this Story:

Follow Webdunia kannada