ಭಾರತದ ತಂಡಕ್ಕೆ ಮೈದಾನದ ಹೊರಗಿನ ವಿವಾದಗಳು ಯಾವ ಪರಿಣಾಮವನ್ನು ಬೀರುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ತಮ್ಮ ಆಟಗಾರರಿಗೆ ಕಠಿಣ ತರಬೇತಿ ನೀಡಲಾಗಿದ್ದು, ಮುಂದಿನ ಆರು ತಿಂಗಳವರೆಗ ಅವರ ಗಮನ ಕ್ರಿಕೆಟ್ ಮೇಲೆ ಮಾತ್ರವಿರುತ್ತದೆ ಎಂದು ಹೇಳಿದರು.
ಯಾವುದೇ ನಕಾರಾತ್ಮಕ ಭಾವನೆಗೆ ಅವಕಾಶವಿಲ್ಲ. ನಮ್ಮ ತಕ್ಷಣದ ಗಮನ ಟೆಸ್ಟ್ ಕ್ರಿಕೆಟ್ ಕಡೆಗೆ ಎಂದು ಕೊಹ್ಲಿ ಹೇಳಿದರು. ಮೈದಾನದ ಹೊರಗಿನ ಘಟನೆಗಳಿಂದ ನಾವು ವಿಚಲಿತರಾಗುವುದಿಲ್ಲ ಎಂದು ಆಶ್ವಾಸನೆ ನೀಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಮುದ್ಗಲ್ ಸಮಿತಿ ವರದಿ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ವರದಿ ನೀಡಿದ ನಂತರ, ಸುಪ್ರೀಂಕೋರ್ಟ್ ನ.24ರಂದು ತೀರ್ಪು ನೀಡಲಿದೆ. ಈ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕೊಹ್ಲಿ ಮೈದಾನದ ಹೊರಗಿನ ಘಟನೆಗಳಿಗೆ ಕುಗ್ಗುವುದಿಲ್ಲ ಎಂದಿದ್ದಾರೆ.
2003-04ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದ ರೀತಿಯಲ್ಲಿ ಈ ಬಾರಿಯೂ ಭಾರತ ಆಸ್ಟ್ರೇಲಿಯಾವನ್ನು ಸೋಲಿಸುವ ವಿಶ್ವಾಸ ಹೊಂದಿರುವುದಾಗಿ ಹೇಳಿದರು.