Select Your Language

Notifications

webdunia
webdunia
webdunia
webdunia

ಕಾರು ಅಪಘಾತದಿಂದ ಪವಾಡಸದೃಶ ರೀತಿಯಲ್ಲಿ ಪಾರಾದ ಗವಾಸ್ಕರ್

ಕಾರು ಅಪಘಾತದಿಂದ ಪವಾಡಸದೃಶ ರೀತಿಯಲ್ಲಿ  ಪಾರಾದ ಗವಾಸ್ಕರ್
ಲಂಡನ್ , ಮಂಗಳವಾರ, 12 ಆಗಸ್ಟ್ 2014 (17:14 IST)
ಭಾರತ ತಂಡದ ಮಾಜಿ ನಾಯಕ ಪ್ರಸಿದ್ಧ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಕಾರ್ ಅಪಘಾತದಿಂದ ಪವಾಡಸೃದಶ ರೀತಿಯಲ್ಲಿ ಪಾರಾಗಿದ್ದಾರೆ.
 
ನಾಲ್ಕನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಮ್ಯಾಂಚೆಸ್ಟರ್‌ನಿಂದ ಲಂಡನ್‌ ಕಡೆಗೆ ಪ್ರಯಾಣಿಸುತ್ತಿದ್ದ ಜಾಗ್ವಾರ್ ಕಾರ್ ಚಾಲಕ ಬಲಕ್ಕೆ ತಿರುಗಿದಾಗ ವಿರುದ್ಧ ದಿಕ್ಕಿನಿಂದ ಇನ್ನೊಂದು ವಾಹನ ಡಿಕ್ಕಿಹೊಡೆಯಿತು.

ಗವಾಸ್ಕರ್ ಅವರು ಲಂಡನ್ ಮೂಲದ ಸ್ನೇಹಿತ ಚಂದ್ರೇಶ್ ಪಟೇಲ್ ಮತ್ತು ಸಹ ಕಾಮೆಂಟೇಟರ್ ಮಾರ್ಕ್ ನಿಕೋಲಾಸ್ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗಾವಸ್ಕರ್ ಹಿಂಭಾಗದ ಸೀಟಿನ ಎಡಭಾಗದಲ್ಲಿ ಕುಳಿತಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನ ಗವಾಸ್ಕರ್ ಕುಳಿತಿದ್ದ ಬದಿಯಲ್ಲೇ ಡಿಕ್ಕಿ ಹೊಡೆಯಿತು.

ಜಾಗ್ವಾರ್ ಕಾರಿಗೆ ತೀವ್ರ ಹಾನಿಯಾಗಿದ್ದರೂ, ಕಾರಿನಲ್ಲಿ ಕುಳಿತಿದ್ದವರು ಯಾವುದೇ ಗಾಯವಾಗದೇ ಪಾರಾಗಿದ್ದಾರೆ. ಕಾರಿಗೆ ಹಾನಿಯಾಗಿದ್ದರಿಂದ ಕಾರಿನಲ್ಲಿದ್ದ ಎಲ್ಲಾ ಮೂವರು ಲಂಡನ್‌ಗೆ ವಿಮಾನದಲ್ಲಿ ತೆರಳಿದರು. 

Share this Story:

Follow Webdunia kannada