Webdunia - Bharat's app for daily news and videos

Install App

ಭಾರತ ಸಮತೋಲಿತ ತಂಡವಾಗಿದ್ದು ಸೋಲಿಸುವುದು ಕಷ್ಟ: ಸಚಿನ್

Webdunia
ಗುರುವಾರ, 4 ಸೆಪ್ಟಂಬರ್ 2014 (19:49 IST)
ನಿವೃತ್ತ ಬ್ಯಾಟಿಂಗ್ ಪ್ರತಿಭೆ ಸಚಿನ್ ತೆಂಡೂಲ್ಕರ್ ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.   ತಂಡದ ಆಲ್ ರೌಂಡ್ ಸಾಮರ್ಥ್ಯದ ಕಾರಣದಿಂದ ಅದು ವಿಜಯಿಯಾಗುತ್ತದೆಂದು ಆಶಾಭಾವನೆ ವ್ಯಕ್ತಪಡಿಸಿದರು.

 ಪ್ರಶಸ್ತಿಗಾಗಿ ಭಾರತ ಪ್ರಬಲ ಸ್ಪರ್ಧಿಗಳಲ್ಲಿ ಒಂದಾಗಿದೆ.  ಭಾರತ ತಂಡ ಸಮತೋಲಿತ ತಂಡವಾಗಿದ್ದು ಸೋಲಿಸುವುದು ಕಷ್ಟ ಎಂದು ತೆಂಡೂಲ್ಕರ್ ಪ್ರತಿಕ್ರಿಯಿಸಿದರು.

ಇಂಗ್ಲೆಂಡ್ ವಿರುದ್ಧ 3-0ಯಿಂದ ಜಯಗಳಿಸಿದ ಭಾರತದ ತಂಡದ ಆಟಗಾರರ ಬಗ್ಗೆ ಶ್ಲಾಘಿಸಿದರು.  ಬ್ಯಾಟಿಂಗ್ ನೋಡುವುದಾದರೆ ಬಲ ಮತ್ತು ಎಡಗೈ ಆಟಗಾರರ ಮಿಶ್ರಣವಿದೆ.  ಕ್ರೀಸ್‌ನಲ್ಲಿ ಬಲ ಮತ್ತು ಎಡ ಸಂಯೋಜನೆಯಿದ್ದಾಗ ಬೌಲರ್‌ಗಳಿಗೆ ಕಠಿಣವಾಗುತ್ತದೆ.

 ಅವರು ಸರಿಯಾದ ಲೈನ್ ಕಂಡುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.  ಭಾರತ ಆಳವಾದ ಬ್ಯಾಟಿಂಗ್ ಬಲ ಹೊಂದಿದ್ದರೂ ಅನನುಭವಿ ಬೌಲಿಂಗ್ ಕೊನೆಯ ಓವರುಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ.

ಆದರೆ ಬೌಲಿಂಗ್ ದಾಳಿ ಕೂಡ ಚೆನ್ನಾಗಿ ಸಂಯೋಜನೆಯಾಗಿದೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.  2015ರ ವಿಶ್ವ ಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಫೆ. 14-ಮಾರ್ಚ್ 29ರವರೆಗೆ ನಡೆಯಲಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments