Select Your Language

Notifications

webdunia
webdunia
webdunia
webdunia

"ಚೆಂಡನ್ನು ಸದಾ ಉರುಳುವಂತೆ ಮಾಡಿ" ಹರ್ಭಜನ್‌ಗೆ ಪೀಲೆ ಸಲಹೆ

ರಿಯೋ ಡಿ ಜನೈರೋ , ಭಾನುವಾರ, 29 ಜೂನ್ 2014 (16:19 IST)
ಬ್ರೆಜಿಲ್‌ನ ಪ್ರಸಿದ್ಧ ಮಾಜಿ ಫುಟ್ಬಾಲ್ ಆಟಗಾರ ಪೀಲೆಯನ್ನು ಭಾರತದ ಕ್ರಿಕೆಟ್ ಆಫ್‌ಸ್ಪಿನ್ನರ್  ಹರ್ಭಜನ್  ಸಿಂಗ್ ಅವರು ಭೇಟಿ ಮಾಡಿದಾಗ ಹರ್ಭಜನ್ ಅವರಿಗೆ ಪೀಲೆ ನೀಡಿದ ಹಿತವಚನ ಯಾವುದಿರಬಹುದು? ರಿಯೋ ಡಿ ಜನೈರೋನಲ್ಲಿ ಬ್ಲಾಕ್ ಪರ್ಲ್ ಅವರಿಗೆ ಕರೆ ಮಾಡಿ ಭೇಟಿ ಮಾಡಿದ ಹರ್ಭಜನ್ ಈ ಭೇಟಿಯನ್ನು ಜೀವಮಾನದ ಅನುಭವ ಎಂದು ಬಣ್ಣಿಸಿದ್ದಾರೆ.

101 ಟೆಸ್ಟ್‌ಗಳಲ್ಲಿ 413 ವಿಕೆಟ್ ಪಡೆದಿದ್ದರೂ ಪ್ರಸಕ್ತ ಭಾರತ ತಂಡದಿಂದ ಹೊರಗುಳಿದಿರುವ ಹರ್ಭಜನ್ ಪೀಲೆಯವರಿಗೆ ಪುನಃ ಹಿಂತಿರುಗಿ ಹೋರಾಡುವ ಉತ್ತಮ ಮಾರ್ಗಯಾವುದೆಂದು ಪ್ರಶ್ನಿಸಿದಾಗ, ' ಚೆಂಡನ್ನು ಸದಾ ಉರುಳುವಂತೆ ಮಾಡಿ' ಎಂದು ಜೀವಂತ ದಂತಕತೆ ಪೀಲೆ ಹರ್ಭಜನ್‌ಗೆ ಹಿತವಚನ ಹೇಳಿದರು.

ಪೀಲೆ  1958, 1962 ಮತ್ತು 1970ರಲ್ಲಿ ವಿಶ್ವಕಪ್ ಗೆದ್ದ ಬ್ರೆಜಿಲ್ ತಂಡದ ಆಟಗಾರರರಾಗಿದ್ದರು. ಜಗತ್ತಿನ ಮಹಾನ್ ಕ್ರೀಡಾಪಟುವಾಗಿದ್ದು ಹೇಗೆಂದು ಹರ್ಭಜನ್ ಪ್ರಶ್ನಿಸಿದಾಗ,  ನಾನು ಕಷ್ಟ ಪಟ್ಟು ಶ್ರಮದಿಂದ ಆ ಸ್ಥಾನ ತಲುಪಿದ್ದೇನೆ. ಸ್ಟಾರ್ ಆಗುವುದು ಸುಲಭ. ಆದರೆ ಅದನ್ನು ಸುಸ್ಥಿರವಾಗಿ ಉಳಿಸಿಕೊಂಡು ಹೋಗು ವುದು ಕಷ್ಟ ಎಂದು ಪೀಲೆ ಹೇಳಿದರು. 

Share this Story:

Follow Webdunia kannada