Webdunia - Bharat's app for daily news and videos

Install App

ಬಂಗಾಳ ವಿರುದ್ಧ ಚೇತರಿಸಿಕೊಂಡ ಕರ್ನಾಟಕ 237ಕ್ಕೆ 7 ವಿಕೆಟ್

Webdunia
ಸೋಮವಾರ, 15 ಡಿಸೆಂಬರ್ 2014 (09:12 IST)
ಪಶ್ಚಿಮಬಂಗಾಳದ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ 69ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡ ಚೇತರಿಸಿಕೊಂಡು ದಿನದಂತ್ಯಕ್ಕೆ 237 ರನ್ನಿಗೆ 7 ವಿಕೆಟ್ ಕಳೆದುಕೊಂಡಿದೆ.  ಸೂರ್ಯನ ಕಣ್ಣಾಮುಚ್ಚಾಲೆಯಾಟದಿಂದ 66 ಓವರುಗಳ ಬೌಲಿಂಗ್ ಮಾತ್ರ ಸಾಧ್ಯವಾಯಿತು.

ಕರ್ನಾಟಕ ಬ್ಯಾಟಿಂಗ್ ಆಡಲಿಳಿದ ಕೂಡಲೇ ಅಶೋಕ್ ದಿಂಡಾ ಕರ್ನಾಟಕದ ಅಗ್ರ ಮೂವರು ಆಟಗಾರರನ್ನು ಔಟ್ ಮಾಡಿದ್ದರಿಂದ ಅವರ ಬೌಲಿಂಗ್ ಅಂಕಿಅಂಶ 7-3-19-3ಕ್ಕೆ ತಲುಪಿದೆ.ನಂತರ ಇನ್ನೊಂದು ವಿಕೆಟ್ ಪಡೆದು 50 ರನ್‌‍ಗೆ 4 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಸ್ಟುವರ್ಟ್ ಬಿನ್ನಿ ಬಂಗಾಳದ ಬೌಲರುಗಳನ್ನು ದಂಡಿಸುತ್ತಾರೆಂಬ ನಿರೀಕ್ಷೆ ಹುಸಿಯಾಗಿ ಸುಲಭ ಕ್ಯಾಚಿತ್ತು 37ರನ್‌ಗೆ ಔಟಾದರು.

ಬಂಗಾಳದ ವೀರ್ ಪ್ರತಾಪ್ ಸಿಂಗ್ 45 ರನ್‌ಗೆ 3 ವಿಕೆಟ್ ಗಳಿಸಿ ಮನೋಜ್ಞ ಬೌಲಿಂಗ್ ದಾಳಿ ಮಾಡಿ ಪಾಂಡೆ ಮತ್ತು ಕರುಣ್ ನಾಯರ್ ವಿಕೆಟ್ ಪಡೆದರು.ಎರಡನೇ ಸೆಷನ್‌ನಲ್ಲಿ ಗೌತಮ್ ಮತ್ತು ವಿನಯ್ ಕುಮಾರ್ ಕೆಲವು ಬೌಂಡರಿಗಳ ಮೂಲಕ ಪುನಃ ಇನ್ನಿಂಗ್ಸ್ ನಿರ್ಮಿಸಿದರು.

ಗೌತಮ್ 63 ರನ್ ಗಳಿಸಿದ್ದಾಗ ವೀರ್ ಪ್ರತಾಪ್ ಅವರ ಶಾರ್ಟ್ ಬಾಲ್‌ಗೆ ಔಟಾದರೂ ಕರ್ನಾಟಕವನ್ನು ಸುರಕ್ಷತೆಯ ದಡವನ್ನು ಮುಟ್ಟಿಸಿದ್ದರು. ನಂತರ ಆಡಲಿಳಿದ ಶ್ರೈಯಾಸ್ ಗೋಪಾಲ್ ವಿನಯ್ ಕುಮಾರ್ ಜೊತೆ 8ನೇ ವಿಕೆಟ್‌‍ಗೆ 59 ರನ್ ಜೊತೆಯಾಟವಾಡಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments