ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ವಿಂಡಿಸ್ ನಾಲ್ಕನೇ ಏಕದಿನ ಪಂದ್ಯವನ್ನಾಡಲಿದ್ದು, ಪೈಪೋಟಿಯ ಹೋರಾಟವನ್ನು ನಿರೀಕ್ಷಿಸಲಾಗಿದೆ.
ಎರಡು ತಂಡಗಳು 1-1 ಸಮಬಲ ಸಾಧಿಸಿದ್ದು ಇಂದಿನ ಪಂದ್ಯ ನಿರ್ಣಾಯಕ ಪಂದ್ಯ ಎನಿಸಲಿದೆ.
ಕೊಚ್ಚಿಯಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ವಿಂಡಿಸ್ ಅಬ್ಬರದಲ್ಲಿ ಕೊಚ್ಚಿ ಹೋಗಿದ್ದ ಧೋನಿ ಪಡೆ, ದಿಲ್ಲಿಯ ಕೋಟ್ಲಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಜಯದ ಲಯಕ್ಕೆ ಹಿಂತಿರುಗಿ 5 ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಮಾಡಿಕೊಂಡಿತ್ತು, ಇದೀಗ 4ನೇ ಪಂದ್ಯದಲ್ಲಿಯೂ ಗೆದ್ದು ಸರಣಿ ಮೇಲುಗೈ ಸಾಧಿಸುವತ್ತ ಚಿತ್ತ ಹರಿಸಿದೆ.
ವಿಶಾಖಪಟ್ಟಣಂನಲ್ಲಿ ನಡೆಯಬೇಕಿದ್ದ ಮೂರನೇ ಏಕದಿನ ಪಂದ್ಯ ಹುಡ್ಹುಡ್ ಚಂಡಮಾರುತದ ಪರಿಣಾಮ ರದ್ದಾಗಿತ್ತು.
ದಿಲ್ಲಿಯ ಕೋಟ್ಲಾ ಅಂಗಳದಲ್ಲಿ ಸ್ಪಿನ್ ಬೌಲರ್ಗಳಾದ ರವೀಂದ್ರ ಜಡೇಜಾ ಹಾಗೂ ಅಮಿತ್ ಮಿಶ್ರಾ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಸ್ಪಿನ್ ದಾಳಿಗೆ ನಲುಗಿದ ವಿಂಡೀಸ್ ಕೇವಲ 45 ರನ್ಗಳಿಂದ ಸೋಲಿಗೆ ಶರಣಾಗಿತ್ತು.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ, ತಂಡ ಸೇರಿದ್ದು ಬೌಲಿಂಗ್ ದಾಳಿಗೆ ಹೆಚ್ಚಿನ ಬಲ ಬಂದಂತಾಗಿದೆ.
ಸತತ ಬ್ಯಾಟಿಂಗ್ ವೈಫಲ್ಯದಿಂದ ನಿರಾಶೆ ಮೂಡಿಸಿದ್ದ ವಿರಾಟ್ ಕೊಹ್ಲಿ, ದಿಲ್ಲಿಯ ಕೊಟ್ಲಾ ಅಂಗಳದಲ್ಲಿ ಅರ್ಧ ಶತಕ ಗಳಿಸಿ ಲಯಕ್ಕೆ ಮರಳಿರುವುದು ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಸಿದ್ದು ಇಂದು ಸಹ ಇವರು ಅಬ್ಬರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕ್ಯಾಪ್ಟನ್ ಕೂಲ್ಗೆ ಇದು 250 ನೇ ಪಂದ್ಯವಾಗಿದ್ದು, ಧೋನಿ ಬಾಯ್ಸ್ ತಮ್ಮ ನಾಯಕನಿಗೆ ಗೆಲುವಿನ ಸಿಹಿ ತಿನ್ನಿಸುವ ಉತ್ಸಾಹದಲ್ಲಿದ್ದಾರೆ.