Webdunia - Bharat's app for daily news and videos

Install App

ಹಿರಿಯರಿಗೆ ಕೋಕ್:4ನೇ ಪಂದ್ಯಕ್ಕೆ ಅಡ್ಡಪರಿಣಾಮ?

Webdunia
ಬುಧವಾರ, 23 ಜನವರಿ 2008 (17:03 IST)
ಏಕದಿನ ಸರಣಿಗೆ ಭಾರತ ತಂಡದಿಂದ ಹಿರಿಯ ಆಟಗಾರರನ್ನು ಕೈಬಿಟ್ಟಿರುವುದು, ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಕ್ರಿಕೆಟಭಿಮಾನಿಗಳ ಅಭಿಪ್ರಾಯ.

ಏಕದಿನ ತಂಡದಲ್ಲಿ ಹಿರಿಯ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಕೈಬಿಟ್ಟಿದ್ದು, ಆಯ್ಕೆ ಮಂಡಳಿಯ ಈ ನಿಲುವು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದರಂತೆ, ಈ ಮೂವರು ಹಿರಿಯ ಆಟಗಾರರು ನಾಲ್ಕನೇ ಟೆಸ್ಟ್‌ನಲ್ಲಿ ಆಡಲಿದ್ದು, ಅವರ ಆಟದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಕ್ರಿಕೆಟ್ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ತಂಡದ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ, ಇದು ಮುಂದಿನ ಆಟದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರದು ಎಂದು ಭರವಸೆ ನೀಡಿದ್ದಾರೆ. ಆದರೆ ಇನ್ನೂ ಒಂದು ಪಂದ್ಯ ಉಳಿದಿರುವಾಗ ಏಕದಿನ ತಂಡವನ್ನು ಆಯ್ಕೆ ಮಾಡಿರುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಟಗಾರರನ್ನು ಕೈ ಬಿಟ್ಟಿರುವುದಿದ್ದರೆ, ಆ ಮೊದಲು ನಡೆಯಬೇಕಾಗಿದ್ದ ಪಂದ್ಯದ ಮೊದಲು ಘೋಷಣೆ ಮಾಡುವುದು ಎಂದಿಗೂ ಸರಿಯಲ್ಲ ಎನ್ನುವುದು ನಾಯಕನ ಮಾತು . ಇದೇ ವೇಳೆ, ತನ್ನ ಸಹ ತಂಡದಿಂದ ಹೊಬಿದ್ದಿರುವ ಹಿರಿಯ ಆಟಗಾರರಿಗೆ, ಅದರ ಬಗ್ಗೆ ಹೆಚ್ಚು ಯೋಚಿಸದೇ, ಗುಣಾತ್ಮಕವಾಗಿ ಆಡಿ ಪಂದ್ಯವನ್ನು ಜಯಿಸೋಣ ಎಂದಿದ್ದಾರೆ.

ಹಿರಿಯ ಆಟಗಾರರಿಗೆ ನಾವು ಅಷ್ಟು ಸುಲಭವಾಗಿ ಮರೆತು ಬಿಡಿ ಎನ್ನಲು ಸಾಧ್ಯವಿಲ್ಲ. ಹಾಗೇ, ನಮ್ಮ ಹಿರಿಯ ಆಟಗಾರರೂ ಕೂಡಾ ಪ್ರಬುದ್ಧರಾಗಿರುವುದರಿಂದ ಇಂತಹ ವಿಷಯಗಳಿಗೆ ಹೆಚ್ಚು ತಲೆಕಡಿಸದೆ ನೈಜ ಆಟ ಆಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿರಿಯರಲ್ಲಿ ಒರ್ವರಾಗಿರುವ ಗಂಗೂಲಿ, ತಂಡದಿಂದ ಕಿತ್ತು ಹಾಕಿರುವುದಕ್ಕೆ ಮೃದುವಾಗಿ ಸ್ಪಂದಿಸಿದ್ದಾರೆ. ನಾನು ಏಕದಿನ ತಂಡದಲ್ಲಿ ಸ್ಥಾನ ನೀಡಲಿಲ್ಲ ಎಂದು ಚಿಂತೆ ಮಾಡುತ್ತಾ ಇರುವುದಿಲ್ಲ. ಮುಂದಿನ ಟೆಸ್ಟ್‌ನ ಕಡೆಗೆ ಗಮನ ಕೇಂದ್ರೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

Show comments