Select Your Language

Notifications

webdunia
webdunia
webdunia
webdunia

ಸ್ಪಾಟ್‌ ಫಿಕ್ಸಿಂಗ್‌: ಶಿಲ್ಪಾಶೆಟ್ಟಿ ಪತಿ ಕುಂದ್ರಾಗೆ ಕಂಟಕ

ಸ್ಪಾಟ್‌ ಫಿಕ್ಸಿಂಗ್‌: ಶಿಲ್ಪಾಶೆಟ್ಟಿ ಪತಿ ಕುಂದ್ರಾಗೆ ಕಂಟಕ
ನವದೆಹಲಿ , ಸೋಮವಾರ, 1 ಜುಲೈ 2013 (14:22 IST)
PTI
ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣವನ್ನು ಭೇದಿಸಿದ ದೆಹಲಿ ಪೊಲೀಸರು ಅಮಾನತುಗೊಂಡಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಲೀಕ ಹಾಗೂ ಬಾಲಿವುಡ್‌ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ಅವರ ಬೆಟ್ಟಿಂಗ್‌ ಪ್ರಕರಣದ ತನಿಖೆ ನಡೆಸುವಂತೆ ಜೈಪುರ ಪೊಲೀಸರಿಗೆ ಮನವಿ ಮಾಡಿದ್ದಾರೆ.

ರಾಜ್‌ ಕುಂದ್ರಾ ಬೆಟ್‌ ಕಟ್ಟಿದ ಐಪಿಎಲ್‌ ಪಂದ್ಯಗಳು ಜೈಪುರದಲ್ಲಿ ನಡೆದಿವೆ. ಹಾಗಾಗಿ ಈ ಪ್ರಕರಣವನ್ನು ಜೈಪುರ ಪೊಲೀಸರು ನಡೆಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ದೆಹಲಿ ಪೊಲೀಸರು ಪ್ರಕರಣದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕುತೂಹಲದ ಅಂಶವೆಂದರೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಂಧಿಸಲಾದ ರಾಜಸ್ಥಾನ್‌ ರಾಯಲ್ಸ್‌ ತಂಡದ ಮೂವರು ಆಟಗಾರರಾದ ಶ್ರೀಶಾಂತ್‌, ಅಜಿತ್‌ ಚಾಂಡೀಲ ಮತ್ತು ಅಂಕಿತ್‌ ಚೌವಾಣ್‌ ವಿರುದ್ಧ ದೆಹಲಿ ಪೊಲೀಸರು ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ಮೂವರು ಆಟಗಾರರಿಗೆ ಜಾಮೀನು ದೊರೆಯಲು ಸಹಾಯಕವಾಗಿತ್ತು ಎಂಬ ಮಾತುಗಳು ಕೇಳಿ ಬರತೊಡಗಿವೆ.

Share this Story:

Follow Webdunia kannada