ಭಾರತ ಮತ್ತು ಪಾಕಿಸ್ಥಾನ ನಡುವಣ ಜೂನ್ ಮೂರರಂದು ನಡೆಯುವ ಟ್ವೆಂಟಿ-20 ವಿಶ್ವಕಪ್ ಅಭ್ಯಾಸ ಪಂದ್ಯವೀಗ ಸಹಾಯಾರ್ಥ ಪಂದ್ಯವಾಗಲಿದೆ. ಲಂಕಾ ತಂಡದ ಪಾಕ್ ಪ್ರವಾಸದ ವೇಳೆ ಲಾಹೋರ್ನಲ್ಲಿ ಲಂಕನ್ ಕ್ರಿಕೆಟಿಗರ ಮೇಲೆ ನಡೆದ ದಾಳಿಯ ವೇಳೆ ಬಲಿಯಾದ ಭದ್ರತಾ ಪಡೆಯ ಕುಟುಂಬಗಳ ಆರ್ಥಿಕ ನೆರವಿಗಾಗಿ ಈ ಪಂದ್ಯವನ್ನು ಆಡಲಾಗುವುದೆಂದು ಐಸಿಸಿ ಅಧ್ಯಕ್ಷ ಡೇವಿಡ್ ಮೋರ್ಗನ್ ತಿಳಿಸಿದ್ದಾರೆ. ಐಸಿಸಿಯ ಈ ನಿರ್ಧಾರವನ್ನು ಪಿಸಿಬಿ ಅಧ್ಯಕ್ಷ ಇಜಾಜ್ ಬಟ್ ಸ್ವಾಗತಿಸಿದ್ದಾರೆ.