ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿರುವ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, 1996ರ ಯಶಸ್ಸು ಪುನರಾವರ್ತನೆಯಾಗಲು ತಂಡಕ್ಕೆ ನೆರವಾಗುವುದರಲ್ಲಿ ವಿಶ್ವಾಸವಿದೆ ಎಂದು ಹೇಳಿದರು.
ಲಂಕಾ ಕ್ರಿಕೆಟ್ ಭವಿಷ್ಯಕ್ಕೆ 2011ರ ವಿಶ್ವಕಪ್ ಗೆಲುವು ಹೊಸ ಚೈತ್ಯನ್ಯವನ್ನು ನೀಡಲಿದೆ ಎಂದು ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮುರಳಿ ತಿಳಿಸಿದರು.
ಮುಂದಿನ ವಿಶ್ವಕಪ್ ಗೆಲುವನ್ನು ಎದುರು ನೋಡುತ್ತಿದ್ದೇವೆ. ಆ ಮೂಲಕ ದ್ವೀಪ ರಾಷ್ಟ್ರದ ಕ್ರಿಕೆಟ್ ಭವಿಷ್ಯ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಅಷ್ಟೇ ಅಲ್ಲದೆ ಇದರಿಂದ ವಿಶ್ವ ಶ್ರೇಷ್ಠ ಕ್ರಿಕೆಟಿಗರನ್ನು ಸೃಷ್ಟಿಮಾಡಲು ಸಾಧ್ಯವಾಗಲಿದೆ ಎಂದು 1996ರ ವಿಶ್ವಕಪ್ ವಿಜೇತ ಲಂಕಾ ತಂಡದ ಸದಸ್ಯನಾಗಿದ್ದ ಮುರಳಿ ತಿಳಿಸಿದರು.
ಹೌದು 1996ರ ವಿಶ್ವಕಪ್ ಜಯ ಶ್ರೇಷ್ಠವಾಗಿತ್ತು. ಅದೇ ರೀತಿ ಕಳೆದ ಬಾರಿ ಕೆರೆಬಿಯನ್ ದ್ವೀಪ ರಾಷ್ಟ್ರದಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ರನ್ನರ್-ಅಪ್ ಆಗಿರುವುದು ಕೂಡಾ ಸಣ್ಣ ಸಾಧನೆ ಎಂದವರು ವಿವರಿಸಿದರು.