ವರ್ಲ್ಡ್ಕಪ್ ಹೀರೊ ಯುವ'ರಾಜ'ನಿಗೆ ಬಡ್ತಿ; ಭಜ್ಜಿ ಬಚಾವ್..!
ನವದೆಹಲಿ , ಶನಿವಾರ, 29 ಅಕ್ಟೋಬರ್ 2011 (18:10 IST)
2011-12
ನೇ ಸಾಲಿನ ಪ್ರಧಾನ ಗುತ್ತಿಗೆ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಕಾರಿಣಿ ಸಮಿತಿ ಘೋಷಿಸಿದ್ದು, ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ಅವರಿಗೆ 'ಎ' ದರ್ಜೆಗೆ ಬಡ್ತಿ ನೀಡಲಾಗಿದೆ. ಅದೇ ಹೊತ್ತಿಗೆ ಇತ್ತೀಚೆಗಿನ ಕಳಪೆ ಫಾರ್ಮ್ನ ಹೊರತಾಗಿಯೂ 'ಎ' ಶ್ರೇಣಿ ಉಳಿಸಿಕೊಳ್ಳುವಲ್ಲಿ ಪಂಜಾಬ್ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಯಶಸ್ವಿಯಾಗಿದ್ದಾರೆ. ಹರಭಜನ್ ಕೌಶಲ್ಯದಲ್ಲಿ ಭರವಸೆ ತೋರಿರುವುದೇ ಮಂಡಳಿ ಹಿಂಬಡ್ತಿ ನೀಡದಿರಲು ಕಾರಣವಾಗಿದೆ. ಕಳೆದ ವರ್ಷ 'ಎ' ಗ್ರೇಡ್ನಲ್ಲಿದ್ದ ಯುವಿ ಅವರನ್ನು 'ಬಿ' ದರ್ಜೆಗೆ ಹಿಂಬಡ್ತಿ ನೀಡಲಾಗಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಅಮೋಘ ನಿರ್ವಹಣೆ ನೀಡಿರುವ ಯುವಿ 28 ವರ್ಷಗಳ ನಂತರ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ವಿಶ್ವಕಪ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ್ದ ಯುವಿ ಸರಣಿ ಪುರಷೋತ್ತಮನಾಗಿ ಹೊರಹೊಮ್ಮಿದ್ದರು.
2011-12
ನೇ ಸಾಲಿನ ಪ್ರಧಾನ ಗುತ್ತಿಗೆ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಕಾರಿಣಿ ಸಮಿತಿ ಘೋಷಿಸಿದ್ದು, ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ಅವರಿಗೆ 'ಎ' ದರ್ಜೆಗೆ ಬಡ್ತಿ ನೀಡಲಾಗಿದೆ. ಅದೇ ಹೊತ್ತಿಗೆ ಇತ್ತೀಚೆಗಿನ ಕಳಪೆ ಫಾರ್ಮ್ನ ಹೊರತಾಗಿಯೂ 'ಎ' ಶ್ರೇಣಿ ಉಳಿಸಿಕೊಳ್ಳುವಲ್ಲಿ ಪಂಜಾಬ್ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಯಶಸ್ವಿಯಾಗಿದ್ದಾರೆ. ಹರಭಜನ್ ಕೌಶಲ್ಯದಲ್ಲಿ ಭರವಸೆ ತೋರಿರುವುದೇ ಮಂಡಳಿ ಹಿಂಬಡ್ತಿ ನೀಡದಿರಲು ಕಾರಣವಾಗಿದೆ. ಕಳೆದ ವರ್ಷ 'ಎ' ಗ್ರೇಡ್ನಲ್ಲಿದ್ದ ಯುವಿ ಅವರನ್ನು 'ಬಿ' ದರ್ಜೆಗೆ ಹಿಂಬಡ್ತಿ ನೀಡಲಾಗಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಅಮೋಘ ನಿರ್ವಹಣೆ ನೀಡಿರುವ ಯುವಿ 28 ವರ್ಷಗಳ ನಂತರ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ವಿಶ್ವಕಪ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ್ದ ಯುವಿ ಸರಣಿ ಪುರಷೋತ್ತಮನಾಗಿ ಹೊರಹೊಮ್ಮಿದ್ದರು.