ವಜ್ರದ ಸರ ಕಳೆದುಕೊಂಡ ಸ್ಟೈಲಿಶ್ ಪ್ಲೇಯರ್ ಯುವಿ
ಗುವಾಹಟಿ , ಸೋಮವಾರ, 27 ಡಿಸೆಂಬರ್ 2010 (12:27 IST)
ಭಾರತೀಯ ಕ್ರಿಕೆಟ್ ತಂಡದ ಸ್ಟೈಲಿಶ್ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರ 5 ಲಕ್ಷಕ್ಕಿಂತಲೂ ಹೆಚ್ಚು ರೂಪಾಯಿ ಬೆಳೆ ಬಾಳುವ ವಜ್ರದ ಸರ ಕಾಣೆಯಾಗಿದೆ. ನವೆಂಬರ್ 28ರಂದು ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ ಆಡಲು ಗುವಾಹಟಿ ಬಂದ ಸಂದರ್ಭದಲ್ಲಿ ಘಟನೆ ನಡೆದಿತ್ತು. ನಂತರ ಅಸ್ಸಾಂ ಕ್ರಿಕೆಟ್ ಮಂಡಳಿ (ಎಸಿಎ) ಗಮನಕ್ಕೆ ತಂದಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಟೀಮ್ ಇಂಡಿಯಾ ಉಳಿದುಕೊಂಡಿದ್ದ ಹೋಟೆಲ್ನಿಂದ ಯುವಿ ಅವರ ಡೈಮಂಡ್ ಸರ ಕಾಣೆಯಾಗಿತ್ತು. ಆದರೆ ಎಸಿಎ ಗಮನಕ್ಕೆ ಯುವಿ ಮ್ಯಾನೇಜರ್ ಅವರಾದ ರಾಜ್ ಕುಮಾರ್ ಕಪೂರ್ ವಿಷಯ ತಿಳಿಸುವ ಹೊತ್ತಿಗೆ ಹೋಟೆಲ್ನಿಂದ ತಂಡ ನಿರ್ಗಮಿಸಿತ್ತು. ಈ ಹಿನ್ನೆಲೆಯಲ್ಲಿ ನಾವೇನೂ ಮಾಡುವಂತಿಲ್ಲ ಎಂದು ಎಸಿಎ ಸ್ಪಷ್ಟನೆ ನೀಡಿದೆ. ವಿಷಯ ನಮ್ಮ ಗಮನಕ್ಕೆ ತಡವಾಗಿ ಬಂದಿತ್ತು. ಘಟನೆಯನ್ನು ಎಸಿಎ ಗಂಭೀರವಾಗಿ ಪರಿಗಣಿಸಿದೆ. ಆದರೆ ಇದರಲ್ಲಿ ಹೆಚ್ಚೆನೂ ಮಾಡುವಂತಿಲ್ಲ. ತಕ್ಷಣ ವಿಷಯ ತಿಳಿಸದ ಹಿನ್ನೆಲೆಯಲ್ಲಿ ಎಸಿಎ ಹೊಣೆ ವಹಿಸುವಂತಿಲ್ಲ. ಹೋಟೆಲ್ನಿಂದ ಸರ ಕಾಣೆಯಾದ ತಕ್ಷಣ ಪೊಲೀಸ್ ಪ್ರಕರಣ ದಾಖಲಿಸಬೇಕಾಗಿತ್ತು ಎಂದು ಎಸಿಎ ಮುಖ್ಯಸ್ಥ ಗೌತಮ್ ರಾಯ್ ತಿಳಿಸಿದ್ದಾರೆ.