1996 ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಸದಸ್ಯರಾಗಿದ್ದ ಸನತ್ ಜಯಸೂರ್ಯ ಮತ್ತು ಚಾಮಿಂಡಾ ವಾಸ್ ಈ ಬಾರಿಯ ವಿಶ್ವಕಪ್ಗಾಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.
ಪ್ರತಿಷ್ಠಿತ ವಿಶ್ವಕಪ್ಗೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಇದರಂತೆ 15 ಮಂದಿ ಸದಸ್ಯರ ತಂಡವನ್ನು ಲಂಕಾ ಪ್ರಕಟಿಸಿದೆ.
1996 ರ ವಿಶ್ವಕಪ್ ಗೆಲುವಿನಲ್ಲಿ ಜಯಸೂರ್ಯ ಮತ್ತು ವಾಸ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ಈ ಬಾರಿಯ ಸಂಭವನೀಯರ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದರು. ಆದರೆ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
1996 ರ ವಿಶ್ವಕಪ್ ತಂಡದಲ್ಲಿದ್ದ ಮತ್ತೊಬ್ಬ ಬೌಲರ್ ಮುತ್ತಯ್ಯ ಮುರಳೀಧನರ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಅಚ್ಚರಿಯೆಂಬಂತೆ ಸೂರಜ್ ರಣಧೀವ್ ಸ್ಥಾನಕ್ಕೆ ರಂಗನಾ ಹೇರಾತ್ ಆಯ್ಕೆಯಾಗಿದ್ದಾರೆ.