Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಗೆದ್ದ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಅದ್ಧೂರಿ ಸ್ವಾಗತ

ರಣಜಿ ಟ್ರೋಫಿ ಗೆದ್ದ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಅದ್ಧೂರಿ ಸ್ವಾಗತ
, ಸೋಮವಾರ, 3 ಫೆಬ್ರವರಿ 2014 (14:21 IST)
PR
PR
ಬೆಂಗಳೂರು: 15 ವರ್ಷಗಳ ನಂತರ ರಣಜಿಟ್ರೋಫಿಯನ್ನು ಗೆದ್ದುಬಂದಿರುವ ರಾಜ್ಯ ಕ್ರಿಕೆಟ್ ತಂಡದ ಆಟಗಾರರಿಗೆ ಅದ್ಧೂರಿ ಸ್ವಾಗತವನ್ನು ಸೋಮವಾರ ನೀಡಲಾಯಿತು. ಹೈದರಾಬಾದಿನಿಂದ ಇಂದು ದೇವನಹಳ್ಳಿ ವಿಮಾನನಿಲ್ದಾಣಕ್ಕೆ ರಾಜ್ಯ ಆಟಗಾರರು ಬಂದಿಳಿದರು. ಕೆಲವೇ ಹೊತ್ತಿನಲ್ಲಿ ರಾಜ್ಯ ತಂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿತು. ಮಹಾರಾಷ್ಟ್ರದ ವಿರುದ್ಧ ಫೈನಲ್ಸ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ರಣಜಿ ಟ್ರೋಫಿಯನ್ನು ಗೆದ್ದಿರುವ ಕರ್ನಾಟಕ ತಂಡ ಈ ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುನ್ನತ ಪ್ರದರ್ಶನ ನೀಡಿದೆ.

ಕರ್ನಾಟಕದ ನಾಯಕ ವಿನಯ್ ಕುಮಾರ್ ಟ್ರೋಫಿಯನ್ನು ಎತ್ತಿಹಿಡಿದು ಪ್ರದರ್ಶಿಸಿದಾಗ ಸಂಭ್ರಮ ಮುಗಿಲು ಮುಟ್ಟಿತು. ರಣಜಿ ಟ್ರೋಫಿ ಗೆದ್ದಿರುವ ತಂಡಕ್ಕೆ 2 ಕೋಟಿ ರೂ. ಬಹುಮಾನ ಸಿಗಲಿದ್ದು, ಕರ್ನಾಟಕ ಸರ್ಕಾರ ಕೂಡ ಒಂದು ಕೋಟಿ ರೂ. ಬಹುಮಾನ ಘೋಷಿಸಿದೆ.

Share this Story:

Follow Webdunia kannada