ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಯಾಗಿ ಪರಿಣಮಿಸಿದೆ. ಈ ನಡುವೆ ಬಿರುಸಿನ ಅರ್ಧಶತಕ ಬಾರಿಸಿರುವ ರಾಬಿನ್ ಉತ್ತಪ ಕರ್ನಾಟಕ ಉತ್ತಮ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ.
ಮೊದಲ ದಿನದಾಟದಲ್ಲಿ ಕೇವಲ 24 ಓವರುಗಳ ಪಂದ್ಯಾಟವಷ್ಟೇ ನೆಡೆದಿತ್ತು. ಈ ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 107 ರನ್ ಪೇರಿಸಿರುವ ಕರ್ನಾಟಕ ತಂಡವು ಉತ್ತಮ ಸ್ಥಿತಿಯಲ್ಲಿದೆ.
ಕೇವಲ 64 ಎಸೆತಗಳನ್ನು ಎದುರಿಸಿದ್ದ ಉತ್ತಪ್ಪ 12 ಬೌಂಡರಿಗಳ ನೆರವಿನಿಂದ 70 ರನ್ ಗಳಿಸಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ ಕೆ.ಬಿ ಪವನ್ 28 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹಾಗೆಯೇ ಅಂತಿಮವಾಗಿ ಆಗಮಸಿರುವ ನಾಯಕ ಗಣೇಶ್ ಸತೀಶ್ ಮೂರು ರನ್ ಗಳಿಸಿದ್ದಾರೆ.
ದಿನದಲ್ಲಿ ಪತನವಾದ ಒಂದು ವಿಕೆಟನ್ನು ಸೌರಾಷ್ಟ್ರ ವೇಗಿ ಜೈದೇವ್ ಉನಾದ್ಕಟ್ ಪಡೆದರು. ಇದಕ್ಕೂ ಮೊದಲು ಸೌರಾಷ್ಟ್ರ ನಾಯಕ ಜಯದೇವ್ ಶಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದರು.