Select Your Language

Notifications

webdunia
webdunia
webdunia
webdunia

ಬಿಸಿಸಿಐ ಕೇಸ್ ಮುಂದೂಡಿದ ಕೋರ್ಟ್: ಶ್ರೀನಿವಾಸ‌ನ್‌ಗೆ ಹಿನ್ನಡೆ

ಬಿಸಿಸಿಐ ಕೇಸ್ ಮುಂದೂಡಿದ ಕೋರ್ಟ್: ಶ್ರೀನಿವಾಸ‌ನ್‌ಗೆ ಹಿನ್ನಡೆ
, ಗುರುವಾರ, 12 ಸೆಪ್ಟಂಬರ್ 2013 (21:36 IST)
PR
PR
ನವದೆಹಲಿ: ಸುಪ್ರೀಂಕೋರ್ಟ್ ಗುರುವಾರ ಬಿಸಿಸಿಐ ವಿರುದ್ಧ ಬಿಹಾರ ಕ್ರಿಕೆಟ್ ಮಂಡಳಿ ಪ್ರಕರಣದ ವಿಚಾರಣೆಯನ್ನು ಕನಿಷ್ಠ ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಮೂಲಕ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಈ ಪ್ರಕರಣವು ಅಷ್ಟೊಂದು ತುರ್ತಲ್ಲ ಎಂದು ಹೇಳಿದ ಕೋರ್ಟ್, ನಂತರ ಇದರ ವಿಚಾರಣೆ ನಡೆಸಬಹುದೆಂದು ತಿಳಿಸಿತು.

ತುರ್ತು ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸಬೇಕೆಂದು ಬಿಸಿಸಿಐ ವಕೀಲದ ಮನವಿ ನಡುವೆಯೂ, ಮಂಡಳಿಯು ಮುಖ್ಯನ್ಯಾಯಮೂರ್ತಿಯನ್ನು ಸಂಪರ್ಕಿಸಿ, ತಕ್ಷಣದ ವಿಲೇವಾರಿಗೆ ಇನ್ನೊಂದು ಪೀಠಕ್ಕೆ ನೀಡುವಂತೆ ಕೋರಬಹುದು ಎಂದು ನ್ಯಾಯಾಧೀಶರು ತಿಳಿಸಿದರು.ಪ್ರತಿಯೊಂದು ವಿಳಂಬವು ಬಿಸಿಸಿಐ ವಕೀಲರಿಗೆ ಮತ್ತು ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್ ಮರುನೇಮಕಕ್ಕೆ ಹಿನ್ನಡೆಯಾಗಿದೆ.

Share this Story:

Follow Webdunia kannada