Webdunia - Bharat's app for daily news and videos

Install App

ಬದಲಾವಣೆಗೆ ಸೂಕ್ತ ಸಮಯವಲ್ಲ

Webdunia
ಭಾನುವಾರ, 30 ಡಿಸೆಂಬರ್ 2007 (11:44 IST)
ಸೋಲಿನಿಂದ ಕಂಗೆಟ್ಟಿದ್ದರೂ, ಪೈಪೋಟಿಯಿಂದ ಹಿಂದೆ ಸರಿಯದ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ವೈಫಲ್ಯಗಳ ಕುರಿತು ವಿಚಾರ ಮಾಡುತ್ತಿದೆ. ಎಂಸಿಜಿಯಲ್ಲಿ 337 ರನ್‌ಗಳ ಸೋಲು, ಇತ್ತೀಚಿನ ದಿನಗಳಲ್ಲಿ ಭಾರತ ಅನುಭವಿಸಿದ ಹೀನಾಯಕರ ಸೋಲು ಆಗಿದ್ದು, ಈ ಸಮಯದಲ್ಲಿ ತಂಡದಲ್ಲಿ ಬದಲಾವಣೆ ತಂದಲ್ಲಿ ಕ್ರಿಕೆಟಿಗರ ಆತ್ಮವಿಶ್ವಾಸ ಕುಸಿಯಬಹುದು ಆದ್ದರಿಂದ ಸಿಡ್ನಿ ಪಿಚ್ ಪರೀಶಿಲಿಸಿದ ನಂತರವೆ ಆಡುವ ಹನ್ನೊಂದು ಕ್ರಿಕೆಟಿಗರ ತಂಡವನ್ನು ಪ್ರಕಟಿಸಲಾಗುವುದು.

ಈಗಾಗಲೇ ಸೋಲಿನಿಂದ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ವಿಷಾದವಿದ್ದು, ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಬ್ಯಾಟ್ಸ್‌ಮನ್‌ಗಳಿಗೆ ಮಾನಸಿಕ ವಿಶ್ರಾಂತಿ ಅವಶ್ಯವಿರುವುದರಿಂದ ಅಭ್ಯಾಸದಲ್ಲಿ ತಂಡ ತೊಡಗಿಕೊಂಡಿಲ್ಲ. ಮೆಲ್ಬರ್ನ್ ಟೆಸ್ಟ್‌ನಲ್ಲಿ ಅತಿಯಾದ ರಕ್ಷಣಾತ್ಮಕ ಆಟವಾಡಿದ್ದು ಸೋಲಿಗೆ ಕಾರಣವಾಯಿತು. ರಕ್ಷಣಾತ್ಮಕ ಮನೋಭಾವದಿಂದ ಕ್ರಿಕೆಟಿಗರು ಹೊರಬಂದು ಸಿಡ್ನಿ ಟೆಸ್ಟ್‌ಗೆ ಸಿದ್ದವಾಗಬೇಕಿದೆ ಕಾರಣ ಅಭ್ಯಾಸವನ್ನು ಬದಿಗೊತ್ತಿ ತಂಡದ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಂಡದ ಸಹಾಯಕ ಕೋಚ್ ಲಾಲ್ ಚಂದ್ ರಜಪೂತ್ ಹೇಳಿದರು.

ಸೋಲಿನ ನಂತರ ನಡೆದ ತಂದ ಸಭೆಯಲ್ಲಿ ರನ್ ನೀಡದೇ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ತಂದು ವಿಕೆಟ್ ಕೀಳುವುದು ಆಸಿಸ್ ತಂಡ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರ. ಈ ತಂತ್ರ ನಮಗೆ ಹೊಸತಲ್ಲ ಆದರೂ ನಾವು ಈ ತಂತ್ರಕ್ಕೆ ಬಲಿಯಾದೆವು. ಮಾನಸಿಕವಾಗಿ ಎದುರಾಳಿ ತಂಡವನ್ನು ಕುಸಿಯುವಂತೆ ಮಾಡುವ ಕಾಂಗರೂಗಳ ತಂತ್ರ ಫಲಿಸಿತು. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮಾನಸಿಕ ಒತ್ತಡಗಳಿಗೆ ಒಳಗಾಗದೇ ಆಟದತ್ತ ಗಮನ ನೀಡಲಾಗುವುದು ಎಂದು ರಜಪೂತ್ ಹೇಳಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments