Webdunia - Bharat's app for daily news and videos

Install App

ಪಾಕ್ ಅನ್ನು ಮಣಿಸಿ ಕೆನಾಡ ಕಪ್ ಎತ್ತಿದ ಲಂಕಾ

Webdunia
ಮಂಗಳವಾರ, 14 ಅಕ್ಟೋಬರ್ 2008 (12:38 IST)
PTI
ಮಾಫ್ಲೆ ಲೀಫ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಕೆನಾಡ ಕಪ್ ಅಂತಿಮ ಹಣಾಹಣಿಯಲ್ಲಿ ಸನತ್ ಜಯಸೂರ್ಯ್ ಮತ್ತು ಅಜಂತಾ ಮೆಂಡಿಸ್ ಶ್ರೀಲಂಕಾವನ್ನು ಪಾಕಿಸ್ತಾನದ ವಿರುದ್ಧ ವಿಜಯದೆಡೆಗೆ ನಡೆಸಿದರು. ಈ ಮೂಲಕ ಉದ್ಘಾಟನಾ ಟಿ20 ಕೆನಾಡ ಕಪ್ ಅನ್ನು ಇನ್ನೂ ಒಂದು ಒವರ್ ಉಳಿದಿರುವಂತೆಯೇ ಐದು ವಿಕೆಟ್‌ಗಳೊಂದಿಗೆ ಶ್ರೀಲಂಕಾ ಗೆದ್ದುಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಮಹೇಲಾ ಜಯವರ್ಧನೆ ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಬೌಲಿಂಗ್ ದಾಳಿಗಿಳಿದ ಅಜಂತಾ ಮೆಂಡಿಸ್, ಸಲ್ಮಾನ್ ಭಟ್, ಶೊಯಬ್ ಮಲ್ಲಿಕ್ ಮತ್ತು ಕಮ್ರಾನ್ ಅಕ್ಮಲ್‌ರ ಪ್ರಮುಖ ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನವನ್ನು132/7ಕ್ಕೆ ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಉಳಿದಂತೆ ಫೆರ್ನಾಂಡೊ, ತುಷಾರ ಮತ್ತು ಮಹಾರೂಫ್ ಲಂಕಾ ಪರವಾಗಿ ತಲಾ ಒಂದು ವಿಕೆಟ್ ಪಡೆದರು.

ಪಾಕ್ ಆರಂಭಿಕ ಆಟಗಾರ ಸಲ್ಮಾನ್ ಭಟ್ ಅತ್ಯಧಿಕ ಸ್ಕೋರರ್ ಆಗಿದ್ದು ಮೆಂಡಿಸ್‌ಗೆ ಬಲಿಯಾಗುವ ಮೊದಲು 44 ರನ್ ಗಳಿಸಿದರು. ಉಳಿದಂತೆ ಮಿಸ್ಬಾ-ಉಲ್ ಹಕ್ ಅಜೇಯ 23 ಮತ್ತು ನಾಯಕ ಮಲ್ಲಿಕ್ 19ರನ್ ಗಳಿಸಿದರು.

ನಂತರ 133ರನ್ ಮೊತ್ತ ಬೆನ್ನಟ್ಟಿದ ಲಂಕಾಗೆ ಜಯಸೂರ್ಯ ಅತ್ಯುತ್ತಮ ಆರಂಭ ದೊರಕಿಸಿಕೊಟ್ಟರು. ಶ್ರೀಲಂಕಾ ಪರವಾಗಿ ಜಯಸೂರ್ಯ ಅತ್ಯಧಿಕ 40 ಮತ್ತು ಇನ್ನೋರ್ವ ಆರಂಭಿಕ ಆಟಗಾರ ಉದವತ್ತೆ 25ರನ್ ಗಳಿಸಿದರು.

ಪಾಕ್ ಪರವಾಗಿ ಶೋಯಬ್ ಮಲ್ಲಿಕ್ ಎರಡು, ಉಮರ್ ಗುಲ್, ಶಾಹಿದ್ ಆಫ್ರಿದಿ ಮತ್ತು ಫವಾದ್ ಅಲಮ್ ತಲಾ ಒಂದು ವಿಕೆಟ್ ಪಡೆದರು.

ಶ್ರೀಲಂಕನ್ನರು ಇನ್ನೂ ಒಂದು ಒವರ್ ಉಳಿದಿರುವಂತೆ ಐದು ವಿಕೆಟ್‌ಗಳೊಂದಿಗೆ ವಿಜಯದ ಗುರಿ ತಲುಪಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments