Select Your Language

Notifications

webdunia
webdunia
webdunia
webdunia

ತಂಡಕ್ಕೆ ಪುನರಾಗಮನ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಯೂಸುಫ್

ತಂಡಕ್ಕೆ ಪುನರಾಗಮನ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಯೂಸುಫ್
ಮುಂಬೈ , ಮಂಗಳವಾರ, 28 ಫೆಬ್ರವರಿ 2012 (11:54 IST)
WD
ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಯೂಸುಫ್ ಪಠಾಣ್ ತಂಡಕ್ಕೆ ಪುನರಾಗಮನ ಮಾಡಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ಸಿಬಿ ಸಿರೀಸ್‌ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಮುಂಬರುವ ಏಷ್ಯಾ ಕಪ್‌ಗಾಗಿ ತಂಡದಲ್ಲಿ ಬದಲಾವಣೆ ಕಂಡಬರುವ ನಿರೀಕ್ಷೆಯಿದೆ. ಇದರಂತೆ ಇತ್ತೀಚೆಗಿನ ಯಶಸ್ಸು ಯೂಸುಫ್‌ಗೆ ನೆರವಾಗುವ ಸಾಧ್ಯತೆಯಿದೆ.

ಸೌರಾಷ್ಟ್ರ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಸ್ಫೋಟಕ ಶತಕ ಸಾಧನೆ ಮಾಡಿದ್ದ ಯೂಸುಫ್, ಫಾರ್ಮ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 78 ಎಸೆತಗಳನ್ನು ಎದುರಿಸಿದ್ದ ಪಠಾಣ್ 114 ರನ್ ಗಳಿಸಿದ್ದರು.

ಏಷ್ಯಾ ಕಪ್‌ಗಾಗಿನ ಟೀಮ್ ಇಂಡಿಯಾ ಘೋಷಣೆ ಫೆಬ್ರವರಿ 29ರಂದು ನಡೆಯಲಿದೆ. ಇದರಂತೆ ಗಾಯದ ನಂತರ ಸಂಪೂರ್ಣ ಚೇತರಿಸಿಕೊಂಡಿರುವುದಾಗಿ ಪಠಾಣ್ ತಿಳಿಸಿದ್ದಾರೆ.

Share this Story:

Follow Webdunia kannada