Webdunia - Bharat's app for daily news and videos

Install App

ಡಿಕ್ಲೇರ್ ವಿಳಂಬ ತಂಡದ ನಿರ್ಧಾರ: ಧೋನಿ

Webdunia
ಮಂಗಳವಾರ, 23 ಡಿಸೆಂಬರ್ 2008 (19:39 IST)
ಯಾವ ಕಾರಣಕ್ಕಾಗಿ ಡಿಕ್ಲೇರ್ ಘೋಷಿಸಲು ವಿಳಂಬ ನೀತಿ ಅನುಸರಿಸಲಾಯಿತು ಎಂಬುದಕ್ಕೆ ಉತ್ತರಿಸಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಶತಕ ದಾಖಲಿಸುವ ಸಾಧ್ಯತೆಯಿದ್ದುದರಿಂದ ಅವಕಾಶ ಮಾಡಿಕೊಡಲಾಯಿತು ಮತ್ತು ಅದು ತಂಡದ ನಿರ್ಧಾರ ಎಂದು ಹೇಳಿದ್ದಾರೆ.

" ಗಂಭೀರ್ ಮತ್ತು ಯುವರಾಜ್ ಶತಕ ಗಳಿಸುವ ಸಾಧ್ಯತೆಗಳಿದ್ದುವು. ದುರದೃಷ್ಟವಶಾತ್ ಅವರಿಗದನ್ನು ನೆರವೇರಿಸಲು ಅಸಾಧ್ಯವಾಯಿತು" ಎಂದು ಪಂದ್ಯ ಮುಗಿದ ನಂತರ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

" ನಿನ್ನೆ ನಮಗೆ ಮಂಜಿನ ಬಗ್ಗೆ ಯಾವುದೇ ಕಲ್ಪನೆಗಳಿರಲಿಲ್ಲ ಮತ್ತು ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿರಲಿಲ್ಲ. ಆದರೆ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದರೆ ನಮಗೆ ಇಂದು ಹಿನ್ನಡೆಯಾಗುತ್ತಿತ್ತು. ನಾವಿಂದು ಉತ್ತಮ ಆರಂಭವನ್ನೇ ಮಾಡಿದ್ದೇವೆ. ಯುವಿ ಮತ್ತು ಗಂಭೀರ್‌ರಿಗೆ ಶತಕ ಪೂರೈಸಲು ಅವಕಾಶ ಕೊಟ್ಟು ನಂತರ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ತಂಡದ್ದು" ಎಂದು ತಿಳಿಸಿದರು.

ಭಾರತವು ಇಂದು ಕೊನೆಗೊಂಡ ಮೊಹಾಲಿ ಟೆಸ್ಟ್‌ನ್ನು ಡ್ರಾ ಮಾಡಿಕೊಂಡಿದ್ದು, ಮೊದಲ ಟೆಸ್ಟನ್ನು ಚೆನ್ನೈಯಲ್ಲಿ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಆ ಮ‌ೂಲಕ ಸರಣಿಯನ್ನು 1-0 ಅಂತರದಿಂದ ತನ್ನ ಬಗಲಿಗೆ ಹಾಕಿಕೊಂಡಿದೆ.

" ಪಂದ್ಯದ ಎಲ್ಲಾ ಯಶಸ್ಸು ಬೌಲರುಗಳಿಗೆ ಅದರಲ್ಲೂ ವೇಗಿಗಳಿಗೆ ಸಲ್ಲಬೇಕಾಗಿದೆ. ಯಾವಾಗ ಅಗತ್ಯವಿತ್ತೋ ಆವಾಗ ಅವರು ವಿಕೆಟ್ ಕಿತ್ತಿದ್ದಾರೆ. ಅದೇ ಹೊತ್ತಿಗೆ ದಾಂಡಿಗರು ಕೂಡ ಉತ್ತಮ ರನ್ ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಭಾಗೀದಾರಿಕೆಯೂ ಕಂಡು ಬಂದಿದೆ" ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments