Select Your Language

Notifications

webdunia
webdunia
webdunia
webdunia

ಟ್ವೆಂಟಿ-20: ಶ್ರೀಲಂಕಾ ಆಟಗಾರರ ತಂಡ ಪ್ರಕಟ

ಟ್ವೆಂಟಿ-20: ಶ್ರೀಲಂಕಾ ಆಟಗಾರರ ತಂಡ ಪ್ರಕಟ
ಕೊಲಂಬೊ , ಗುರುವಾರ, 28 ಮಾರ್ಚ್ 2013 (13:09 IST)
PTI
ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಪಲ್ಲೆಕಲೆಯಲ್ಲಿ ಮಾ. 31ರಂದು ನಡೆಯುವ ಏಕೈಕ ಟ್ವೆಂಟಿ-20 ಪಂದ್ಯಕ್ಕೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಐವರು ಹೊಸ ಆಟಗಾರರಿದ್ದಾರೆ.

ಈ ಪಂದ್ಯಕ್ಕಾಗಿ ಕುಮಾರ ಸಂಗಕ್ಕರ, ತಿಲಕರತ್ನ ದಿಲ್ಶನ್‌ಮತ್ತು ನುವನ್‌ ಕುಲಶೇಖರ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬೆರಳಿಗೆ ಆದ ಗಾಯದಿಂದ ಚೇತರಿಸಿಕೊಂಡಿದ್ದರೂ ಮಾಹೇಲ ಜಯವರ್ಧನ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಆಲ್‌ರೌಂಡರ್‌ಗಳಾದ ಶೆಹಾನ್‌ ಜಯಸೂರ್ಯ, ಚತುರಂಗ ಡಿ'ಸಿಲ್ವ, ರಮಿತ್‌ ರಂಬುಕ್‌ವೆಲ್ಲ ಮತ್ತು ವೇಗಿ ಇಶಾನ್‌ ಜಯರತ್ನ ತಂಡದಲ್ಲಿರುವ ಹೊಸ ಆಟಗಾರರಾಗಿದ್ದಾರೆ. ಈಗಾಗಲೇ ಏಕದಿನ ತಂಡದಲ್ಲಿರುವ ಏಂಜೆಲೊ ಪೆರೆರ ಅವರನ್ನು ಟಿ20 ತಂಡಕ್ಕೆ ಸೇರಿಸಲಾಗಿದೆ.

ನೂತನ ತಂಡವನ್ನು ಗಮನಿಸಿದರೆ ಆಯ್ಕೆಗಾರರು ಯುವ ಆಟಗಾರರತ್ತ ಗಮನ ಹರಿಸಿದ್ದಾರೆ. ತಂಡದಲ್ಲಿರುವ ಐವರು ಹೊಸ ಆಟಗಾರರು ಇನ್ನೂ 24 ವರ್ಷ ದಾಟಿಲ್ಲ. ತಂಡದಲ್ಲಿರುವ ಜೀವನ್‌ ಮೆಂಡಿಸ್‌ ಮಾತ್ರ 30 ವರ್ಷ ಹೆಚ್ಚಿನವರಾಗಿದ್ದಾರೆ.

ಈ ಪಂದ್ಯ ದಿನೇಶ್‌ ಚಂಡಿಮಾಲ್‌ ಅವರ ಟ್ವೆಂಟಿ-20 ನಾಯಕರಾಗಿ ಮೊದಲ ಪಂದ್ಯವಾಗಿದೆ. ಮೊದಲ ಬಾರಿ ಲಸಿತ ಮಾಲಿಂಗ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಟ್ವೆಂಟಿ-20 ತಂಡ: ಕುಶಲ್‌ ಪೆರೆರ, ಲಹಿರು ತಿರಿಮನ್ನೆ, ದಿಲ್ವನ್‌ ಮುನವೀರ, ದಿನೇಶ್‌ ಚಂಡಿಮಾಲ್‌, ಏಂಜೆಲೊ ಮ್ಯಾಥ್ಯೂಸ್‌, ಜೀವನ್‌ ಮೆಂಡಿಸ್‌, ಕಿತುರುವಾನ್‌ ವಿತನಾಗೆ, ಏಂಜೆಲೊ ಪೆರೆರ, ಲಸಿತ ಮಾಲಿಂಗ, ಸಚಿತ್ರ ಸೇನನಾಯಕ, ಶಮಿಂಡ ಇರಂಗ, ಚತುರಂಗ ಡಿ'ಸಿಲ್ವ, ಶೆಹಾನ್‌ ಜಯಸೂರ್ಯ, ರಮಿತ್‌ ರಂಬುಕ್‌ವೆಲ್ಲ, ಇಶಾನ್‌ ಜಯರತ್ನ, ತಿಸ್ಸರ ಪೆರೆರ.

Share this Story:

Follow Webdunia kannada