Webdunia - Bharat's app for daily news and videos

Install App

ಟೆಸ್ಟ್ ನಾಯಕತ್ವ ಉಳಿಸಲು ಧೋನಿ ನಿರ್ವಹಣೆ ನೀಡಲೇ ಬೇಕು: ಗಂಗೂಲಿ

Webdunia
ಬುಧವಾರ, 29 ಫೆಬ್ರವರಿ 2012 (12:02 IST)
WD
ವಿದೇಶದಲ್ಲಿ ಸತತ ಎರಡು ಟೆಸ್ಟ್ ಸರಣಿ ಸೋಲಿನ ನಂತರ ತೀವ್ರ ಮುಖಭಂಗಕ್ಕೊಳಗಾಗಿರುವ ಭಾರತೀಯ ತಂಡದ ಟೆಸ್ಟ್ ನಾಯಕತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಅಗತ್ಯವಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ನಾಯಕತ್ವದಲ್ಲಿ ಧೋನಿ ಮುಂದುವರಿಯಬೇಕಾದ್ದಲ್ಲಿ ಬ್ಯಾಟ್‌ನಲ್ಲೂ ಮಿಂಚಬೇಕಾದ ಅಗತ್ಯವಿದೆ. ನೀವೀಗ ಅವರ ಪ್ರದರ್ಶನವನ್ನೇ ಗಮನಿಸಿ, ಟೆಸ್ಟ್ ತಂಡಕ್ಕೆ ಆರಿಸುವುದು ಅಸಾಧ್ಯ ಎಂದು ಗಂಗೂಲಿ ವಿವರಿಸಿದರು.

ವಿದೇಶದಲ್ಲಿ ಭಾರತದ ನಿರ್ವಹಣೆಯನ್ನೇ ಪರೀಕ್ಷಿಸಿ. ಸತತ ಎಂಟು ಪಂದ್ಯಗಳಲ್ಲಿ ಸೋಲನ್ನು ಕಂಡಿವೆ. ಇದುವೇ ತಂಡದಲ್ಲಿ ಬದಲಾವಣೆ ತರಲು ಹೇರಳವಾಗಿದೆ ಎಂದರು.

ಅದೇ ಹೊತ್ತಿಗೆ ವೀರೇಂದ್ರ ಸೆಹ್ವಾಗ್ ಅವರನ್ನು ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಗಂಗೂಲಿ ಬಣ್ಣಿಸಿದ್ದಾರೆ. ಆಡಿಲೇಡ್ ಟೆಸ್ಟ್‌ಗೂ ಮೊದಲು ವೀರು ತಂಡವನ್ನು ಮುನ್ನಡೆಸಿದ ಎಲ್ಲ ಪಂದ್ಯಗಳಲ್ಲೂ ಭಾರತ ಜಯಭೇರಿ ಮೊಳಗಿಸಿದೆ. ಹಾಗಾಗಿ ಅವರನ್ನು ಕೈಬಿಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.

ಆದರೆ ಗಂಗೂಲಿ ಹೇಳಿಕೆಯನ್ನು ನಿರಾಕರಿಸಿದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಧೋನಿ ತಂಡದಲ್ಲಿದ್ದರೆ ಅದುವೇ ಆಟಗಾರರಿಗೆ ದೊಡ್ಡ ಪ್ರೇರಣೆಯಾಗುತ್ತದೆ. ಆದರೆ ಸೆಹ್ವಾಗ್ ವಿಚಾರದಲ್ಲಿ ಹಾಗಾಗುತ್ತಿಲ್ಲ. ಆದ್ದರಿಂದ ನಾಯಕತ್ವ ಬದಲಾವಣೆ ಸರಿಯದ ಕ್ರಮವಲ್ಲ ಎಂದರು.

ಸರಣಿ ಸೋಲಿಗೆ ಕೇವಲ ಧೋನಿ ಒಬ್ಬರನ್ನೇ ದೂಷಿಸುವುದು ಸರಿಯಲ್ಲ. ಕ್ರಿಕೆಟ್ ತುಂಬಾನೇ ಬದಲಾಗಿದೆ. ಹಿರಿಯ ಆಟಗಾರರು ಸಹ ವೈಫಲ್ಯ ಅನುಭವಿಸಿದ್ದಾರೆ. ಆದರೆ ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments