ಜಾಹೀರ್, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ : ರಾಹುಲ್ ದ್ರಾವಿಡ್
ನವದೆಹಲಿ , ಗುರುವಾರ, 20 ಫೆಬ್ರವರಿ 2014 (17:28 IST)
"
ಜಾಹೀರ್ ಖಾನ್ ರಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸುವ ಅಗತ್ಯವಿದೆ. ಇಲ್ಲದಿದ್ದರೆ ಅವರಿಗೆ ಈ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟನಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು" ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಸ್ಥಾನಗಳಿಸಿದ್ದ ಜಾಹೀರ್ ಪ್ರಭಾವಿ ಬೌಲಿಂಗ್ ಮಾಡಲು ವಿಫಲವಾಗಿದ್ದರು. "
ತಮ್ಮ ವೃತ್ತಿಜೀವನ ಅಂತ್ಯದಲ್ಲಿ ಸಂಘರ್ಷ ಮಾಡಬೇಕು ಎಂದು ಬಯಸುವ ಆಟಗಾರ ಆಗಿರಲಾರರು ಜಾಹೀರ್. ಆದರೆ ಕಳೆದ ಎರಡು ಸರಣಿಗಳಲ್ಲಿ ಅವರು ಸಂಘರ್ಷ ಮಾಡುವುದು ಕಂಡುಬಂತು. ಹೀಗಾಗಿ ಅವರು ಈ ವಿಷಯದಲ್ಲಿ ಆಲೋಚಿಸಬೇಕಾದ ಅವಶ್ಯಕತೆ ಇದೆ" ಎಂದು ದ್ರಾವಿಡ್ ಹೇಳಿದ್ದಾರೆ. 92 ಟೆಸ್ಟ್ ಗಳಿಂದ 311 ವಿಕೆಟ್ ಗಳಿಸಿರುವ ಅವರು ಕಪಿಲ್ ದೇವ್ ನಂತರ ಭಾರತ ಕಂಡ ಯಶಸ್ವಿ ವೇಗದ ಬೌಲರ್ ಎನಿಸಿದ್ದಾರೆ."
ಜಾಹೀರ್ ತಮ್ಮ ವೃತ್ತಿಜೀವನಕ್ಕೆ ಅವಿಸ್ಮರಣೀಯ ಅಂತ್ಯ ನೀಡಬೇಕು ಎಂದು ಬಯಸುತ್ತೇನೆ" ಎಂದು ದ್ರಾವಿಡ್ ಹೇಳಿದ್ದಾರೆ.