Select Your Language

Notifications

webdunia
webdunia
webdunia
webdunia

ಗಿಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಭಜ್ಜಿ

ಗಿಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಭಜ್ಜಿ
, ಸೋಮವಾರ, 3 ನವೆಂಬರ್ 2008 (12:29 IST)
PTI
ಪಿಚ್‌ ಅನ್ನು ಗಮನಿಸಿ ಪಂದ್ಯದಿಂದ ನುಣುಚಿಕೊಳ್ಳುತ್ತಿದ್ದುದಾಗಿ ಹರಭಜನ್ ಸಿಂಗ್‌ರನ್ನು ಟೀಕಿಸಿರುವ ಆಡಂ ಗಿಲ್‌ಕ್ರಿಸ್ಟ್‌ರಿಗೆ ಕಟುವಾದ ಪ್ರತ್ಯುತ್ತರ ನೀಡಿರುವ ಹರಭಜನ್ ಸಿಂಗ್, ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ತಮ್ಮ ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

"ನಿಜ ಹೇಳಬೇಕೆಂದರೆ ಅವರು ತಮ್ಮ ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ. ಇದು ನನ್ನ ಬಗ್ಗೆ ಪ್ರಾಮಾಣಿಕ ಟೀಕೆಯೇ? ನಾನು ಪಂದ್ಯಗಳಿಂದ ನುಣುಚಿಕೊಳ್ಳುತ್ತೇನೆ ಎಂದು ನನ್ನ ಟೀಕಾಕಾರರೂ ಸಹ ಹೇಳಿಲ್ಲ" ಎಂದು ಹರಭಜನ್ ಹೇಳಿದ್ದಾರೆ.

ಹಸಿರು ಹಾಸಿನ ಪಿಚ್‌ ಅನ್ನು ಗಮನಿಸಿ ಹರಭಜನ್ 2004-05ನೇ ಸಾಲಿನ ನಾಗಪುರ ಟೆಸ್ಟ್‌ನಿಂದ ತಪ್ಪಿಸಿಕೊಂಡಿದ್ದರು ಎಂದು ತಮ್ಮ ಜೀವನ ಚರಿತ್ರೆ 'ಟ್ರೂ ಕಲರ್ಸ್‌'ನಲ್ಲಿ ಗಿಲ್‌ಕ್ರಿಸ್ಟ್ ಬರೆದಿದ್ದಾರೆ.

"ಅವರಿಗೆ ಹೀಗೆ ಅನಿಸುವುದಾದರೆ, ಅವರ ಪುಸ್ತಕವನ್ನು ಮಾರಾಟ ಮಾಡಲು ಇದೊಂದೇ ತಂತ್ರವಾದರೆ, ಅವರಿಗೆ ಶುಭವಾಗಲಿ" ಎಂದು ಹರಭಜನ್ ಹೇಳಿದರು.

"ತಮ್ಮ ಪುಸ್ತಕವನ್ನು ಮಾರಾಟ ಮಾಡುವುದೊಂದೇ ಅವರ ಪರಮೋದ್ದೇಶವಾದರೆ ತಮ್ಮ ತಂಡದ ಸಹವರ್ತಿಗಳನ್ನೇ ಇದಕ್ಕಾಗಿ ಬಳಸಿಕೊಳ್ಳಬಹುದೆಂಬ ಸಲಹೆಯನ್ನು ನಾನು ಗಿಲ್‌ಕ್ರಿಸ್ಟ್‌ರಿಗೆ ನೀಡಲು ಬಯಸುತ್ತೇನೆ. ಇದರಿಂದ ಅವರಿಗೆ ಬಹಳಷ್ಟು ವಿಷಯಗಳು ದೊರಕುತ್ತವೆ ಮತ್ತು ಅವು ಸತ್ಯ ಸಂಗತಿಗಳೇ ಆಗಿರುವುದರಿಂದ, ಸುಳ್ಳುಗಳನ್ನು ಸೃಷ್ಟಿಸುವ ಅಗತ್ಯ ಬೀಳುವುದಿಲ್ಲ" ಎಂದು ಹರಭಜನ್ ವ್ಯಂಗ್ಯಾವಾಡಿದ್ದಾರೆ.

ನ್ಯೂಜಿಲ್ಯಾಂಡ್‌ನಲ್ಲಿರಲಿ ಅಥವಾ ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಲ್ಲಿರಲಿ, ತಮ್ಮ ಕೆರಿಯರ್‌ನಲ್ಲಿ ಹಲವಾರು ಬಾರಿ ಹಸಿರು ಹಾಸಿನ ಪಿಚ್‌ನಲ್ಲಿ ಬೌಲಿಂಗ್‌ ನಡೆಸಿ ಯಶಸ್ವಿಯೆನಿಸಿರುವ ಹಲವಾರು ದೃಷ್ಟಾಂತಗಳನ್ನು ಹರಭಜನ್ ನೀಡಿದರು.


Share this Story:

Follow Webdunia kannada