Webdunia - Bharat's app for daily news and videos

Install App

ಗಂಗೂಲಿಗೆ ನೀ ಯಾರೆಂದು ಪ್ರಶ್ನಿಸಿದ ಅಧಿಕಾರಿ

Webdunia
ಗುರುವಾರ, 27 ಅಕ್ಟೋಬರ್ 2011 (11:53 IST)
PTI
ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಥಳೀಯ ಯುವರಾಜ ಸೌರವ್ ಗಂಗೂಲಿ ಅವರನ್ನೇ ನೀ ಯಾರೆಂದು ಪ್ರಶ್ನಿಸಿದ ಘಟನೆ ವರದಿಯಾಗಿದೆ.

ಈಡನ್ ಗಾರ್ಡನ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯದ ವೇಳೆ ಗಂಗೂಲಿ ಮೊದಲ ಬಾರಿಗೆ ಈಡನ್ ಗಾರ್ಡನ್‌ನಲ್ಲಿ ವಿಕ್ಷಕ ವಿವರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ವೀಕ್ಷಕ ವಿವರಣೆಕಾರರ ಕೊಠಡಿಯಲ್ಲಿಯೇ ತನ್ನ ಗುರುತಿನ ಚೀಟಿ ಬಿಟ್ಟು ಪಿಚ್ ವರದಿ ನೀಡಲು ಗಂಗೂಲಿ ಮೈದಾನ ಪ್ರವೇಶಿಸುತ್ತಿದ್ದರು. ಆ ಸಂದರ್ಭದಲ್ಲಿ ಗಂಗೂಲಿಯವರನ್ನು ತಡೆದ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅದಿಕಾರಿ ಧರ್ಮೇಂದ್ರ ಸಿಂಗ್ ಯಾದವ್, ನೀನು ಯಾರೆಂದು ಗಂಗೂಲಿಯವರನ್ನು ಪ್ರಶ್ನಿಸಿದರು. ಆಗ ಟೀಂ ಇಂಡಿಯಾ ಮಾಜಿ ನಾಯಕ ಕೂಲ್ ಆಗಿಯೇ ನಾನು ಸೌರವ್ ಗಂಗೂಲಿ, ಪಿಚ್ ವರದಿ ಕೊಡಲು ಹೋಗುತ್ತಿದ್ದೇನೆ ಎಂದು ವಿನಯವಾಗಿ ಪ್ರತಿಕ್ರಿಯಿಸಿದರು.

ಆದರೆ, ಗಂಗೂಲಿಯ ಉತ್ತರದಿಂದ ತೃಪ್ತಿಯಾಗದ ಯಾದವ್, ಹಾಗಿದ್ದಲ್ಲಿ ನಿಮ್ಮ ಗುರುತಿನ ಚೀಟಿ ತೋರಿಸಿ ಎಂದು ಮರುಪ್ರಶ್ನೆ ಹಾಕಿದರು.ನಾನು ವೀಕ್ಷಕ ವಿವರಣೆಕಾರರ ಕೊಠಡಿಯಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದೂ ಗಂಗೂಲಿ ಹೇಳಿದರು. ಬಳಿಕ ಅವರು ಅಲ್ಲಿಂದ ತೆರಳಿ ವಿವರಣೆಕಾರರ ಕೊಠಡಿಯಲ್ಲಿದ್ದ ತಮ್ಮ ಗುರುತಿನ ಪತ್ರ ತೆಗೆದುಕೊಂಡು ಬಂದು ತೋರಿಸಿ, ಮೈದಾನ ಪ್ರವೇಶಿಸಲು ಅನುಮತಿ ಕೇಳಿದರು. ನಂತರವಷ್ಟೆ ಗಂಗೂಲಿಗೆ ಮೈದಾನ ಪ್ರವೇಶಿಸಲು ಯಾದವ್ ಪರವಾನಿಗಿ ನೀಡಿದರು ಎಂದು ಮೂಲಗಳು ತಿಳಿಸಿವೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments