Webdunia - Bharat's app for daily news and videos

Install App

ಕ್ರಿಕೆಟ್: ಪಂದ್ಯಕ್ಕೆ ವರುಣನ ಅಡ್ಡಿ

Webdunia
ಭಾನುವಾರ, 23 ನವೆಂಬರ್ 2008 (18:29 IST)
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡುತ್ತಿರುವ ಭಾರತ 17 ಓವರುಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 106 ರನ್ನು ಪೇರಿಸುವಷ್ಟರಲ್ಲಿ ಆಟ ಮತ್ತೊಮ್ಮೆ ಮಳೆಯ ಆಡಚಣೆಗೊಳಗಾಗಿದೆ. ಮಳೆಯಿಂದ ಆಟ ನಿಂತಾಗ ಸೆಹ್ವಾಗ್ (61) ಮತ್ತು ಗಂಭೀರ್ (30) ಕ್ರೀಸಿನಲ್ಲಿದ್ದರು.

14 ಓವರ್ ಆಗುತ್ತಿದ್ದಂತೆಯೇ ಮಳೆ ಸುರಿದು ಆಟವನ್ನು ಸುಮಾರು ಒಂದು ತಾಸು ಸ್ಥಗಿತಗೊಳಿಸಿದ ಪರಿಣಾಮವಾಗಿ ಪ್ರತಿ ಇನ್ನಿಂಗ್ಸನ್ನು 44 ಓವರುಗಳಿಗೆ ಕಡಿತಗೊಳಿಸಲಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್‌ಗೆ ಮಾಡಲು ಹೇಳಿತು. ಆರಂಭಿಕ ಆಟಗಾರರಾಗಿ ಇಳಿದ ಸಚಿನ್ ತೆಂಡುಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಆಟ ಪ್ರದರ್ಶಿಸಿ, ಭಾರತದ ರನ್ ಗತಿಗೆ ಆರಂಭಿಕ ಚುರುಕುತನ ನೀಡಿದರು.

ಸರಣಿ ಜೀವಂತವಿರಿಸಲು ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ಇಂಗ್ಲೆಂಡ್‌ಗೆ ಬ್ರಾಡ್ ಮೊದಲ ಯಶಸ್ಸು ತಂದು ಕೊಟ್ಟರು. ಬ್ರಾಡ್ ಸಚಿನ್ ತೆಂಡುಲ್ಕರ್‌‌ (11)ರನ್ನು ಬೌಲ್ಡ್ ಮಾಡಿಸಿದರು.

ತದನಂತರ ಬಂದ ಗೌತಂ ಗಂಭೀರ್, ಸೆಹ್ವಾಗ್ ಜತೆಗೂಡಿ ಪ್ರಸಕ್ತ ಇಂಗ್ಲೆಂಡ್ ಬೌಲರುಗಳನ್ನು ಎರ್ರಾಬಿರ್ರಿಯಾಗಿ ದಂಡಿಸುತ್ತಿದ್ದಾರೆ. ಈ ಕಡೆ ಸೆಹ್ವಾಗ್ ತಮ್ಮ ಎಂದಿನ ಶೈಲಿಯಲ್ಲಿ ಹೊಡೆ ಬಡಿ ಆಟಕ್ಕೆ ಮೊರೆ ಹೋಗಿದ್ದು, ಇಂಗ್ಲೆಂಡ್ ಪಾಳಯದಲ್ಲಿ ಆತಂಕವನ್ನು ಮೂಡಿಸಿದ್ದಾರೆ.

ಭಾರತದ ಪಾಳಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಸಚಿನ್ ತೆಂಡುಲ್ಕರ್‌ ಸ್ಥಾನ ಪಡೆದಿದ್ದರೆ, ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

Show comments