Select Your Language

Notifications

webdunia
webdunia
webdunia
webdunia

ಅಂಪೈಯರ್‌ಗಳ ಮೇಲೆ ಹರಿಹಾಯ್ದ ಬ್ರಿಟಿಷ್ ಮಾಧ್ಯಮ

ಅಂಪೈಯರ್‌ಗಳ ಮೇಲೆ ಹರಿಹಾಯ್ದ ಬ್ರಿಟಿಷ್ ಮಾಧ್ಯಮ
ಲಂಡನ್ , ಶುಕ್ರವಾರ, 21 ನವೆಂಬರ್ 2008 (18:21 IST)
ಕಾನ್ಪುರದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನದ ಪಂದ್ಯದ ಸಂದರ್ಭ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತವನ್ನು ವಿಜಯಿಯೆಂದು ಘೋಷಿಸಿದ ಕ್ರಮವನ್ನು 'ತಾರತಮ್ಯ ನೀತಿ' ಎಂದು ಜರೆದಿರುವ ಬ್ರಿಟಿಷ್ ಮಾಧ್ಯಮಗಳು ಪಂದ್ಯವನ್ನು ಪ್ರಜ್ಞಾಯುತವಾಗಿ ನಡೆಸಲು ವಿಫಲರಾಗಿದ್ದಾರೆ ಎಂದು ಅಂಪೈಯರ್ ರಸೆಲ್ ಟಾಫಿನ್ ಮತ್ತು ಅಮೇಶ್ ಸಾಹಿಬಾ ಅವರ ಮೇಲೆ ಹರಿಹಾಯ್ದಿವೆ.

ವಿಳಂಬವಾಗಿ ಆರಂಭಗೊಂಡು 49 ಒವರ್‌ಗಳಿಗೆ ಕಡಿತಗೊಳಿಸಲ್ಪಟ್ಟ ಪಂದ್ಯದ ಕೊನೆಯಲ್ಲಿ ಮಂದಬೆಳಕಿನ ಕಾರಣದಿಂದ ಭಾರತವನ್ನು ಡಿಎಲ್ ನಿಯಮದಂತೆ 16ರನ್ನುಗಳಿಂದ ವಿಜೇತ ಎಂದು ಘೋಷಿಸಲಾಯಿತು. ಮೊದಲೆರಡು ಪಂದ್ಯಗಳಲ್ಲಿ ಯುವಿ ಅರ್ಭಟದಿಂದ ತತ್ತರಿಸಿದ್ದ ಇಂಗ್ಲೆಂಡ್‌ಗೆ ಮೂರನೇ ಪಂದ್ಯದಲ್ಲಿ ಶಾಪವಾದ ಮಂದಬೆಳಕು 0-3ರ ಹಿನ್ನಡೆ ದೊರಕಿಸಿತು.

ತಮ್ಮ ತಂಡವನ್ನು ಅಧಿಕಾರಿಗಳು ಗೆಲುವಿನಿಂದ ದೂರವಿರಿಸಿದರು ಎಂದು ಹೇಳುವಲ್ಲಿ ಹಿಂದುಳಿಯದ ಇಂಗ್ಲೀಷ್ ನಾಯಕ ಕೇವಿನ್ ಪೀಟರ್‌ಸನ್ ಜೊತೆಗೂಡಿದ ಇಂಗ್ಲೆಂಡ್‌ನ ಕ್ರೋಧಾವಿಷ್ಟ ಮಾಧ್ಯಮಗಳು ಪಂದ್ಯವನ್ನು ನಡೆಸಿದ ರೀತಿಯನ್ನು ದೂಷಿಸಿದವು.

"ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಗಾಗ ಆಟದ ನಿಯಮಗಳನ್ನು ಬದಲಿಸುತ್ತಿರುತ್ತದೆ, ಆದರೆ ಅಂಪೈಯರ್‌ಗಳು ತಮ್ಮ ಸಾಮಾನ್ಯ ಪ್ರಜ್ಞೆಯನ್ನು ಉಪಯೋಗಿಸಬಾರದೆಂದು ಯಾವ ನಿಯಮವೂ ಇಲ್ಲ, ಆದರೆ ಕಾನ್ಪುರದಲ್ಲಿ ಸಾಮಾನ್ಯ ಪ್ರಜ್ಞೆಯನ್ನು ಬಳಸಲೇ ಇಲ್ಲ" ಎಂದು ದ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

"ಸರಣಿಯಲ್ಲಿ ಮೊದಲ ಗೆಲುವು ದಾಖಲಿಸುವ ಉತ್ತಮ ಅವಕಾಶ ಕಳೆದುಕೊಂಡಿದ್ದಕ್ಕೆ ಇಂಗ್ಲೆಂಡ್ ಆಟಗಾರ ಕೋಪ ಅರ್ಥವಾಗುವಂತುಹುದೇ" ಎಂದು ಹೇಳಲಾಗಿದೆ.

ಇಬ್ಬರು ಅಂಪೈಯರ್‌ಗಳಲ್ಲಿ ಹಿರಿಯ ಆಧಿಕಾರಿಯಾಗಿದ್ದ ಟಿಫನ್‌ರನ್ನು ಮಾಧ್ಯಮಗಳು ನೇರ ಅರೋಪಕ್ಕೆ ಗುರಿಯಾಗಿಸಿದವು. ಪೀಟರ್‌ಸನ್ ಮತ್ತು ಇಂಗ್ಲೆಂಡ್ ಕೋಚ್ ಪೀಟರ್ ಮೋರ್ಸ್ ಅವರ ವಿನಂತಿಯಂತೆ ಭೋಜನ ವಿರಾಮದ ಅವಧಿಯನ್ನು ಕಡಿತಗೊಳಿಸಬಹುದಾಗಿತ್ತು ಅಲ್ಲದೇ 45 ನಿಮಿಷಗಳಷ್ಟು ತಡವಾದ ಆರಂಭದ ನಂತರ ಕೇವಲ ಒಂದು ಒವರ್‌ ಕಡಿತ, ತರ್ಕಕ್ಕೆ ಸಿಗದ ನಿರ್ಣಯ ಎಂದು ಹೇಳಿವೆ.

Share this Story:

Follow Webdunia kannada