Webdunia - Bharat's app for daily news and videos

Install App

ಸುಪ್ರೀಂ ಕೋರ್ಟ್ ಆದೇಶದಿಂದ ಐಪಿಎಲ್, ರಣಜಿ ಟ್ರೋಫಿ ಗತಿಯೇನು?

Webdunia
ಮಂಗಳವಾರ, 3 ಜನವರಿ 2017 (10:50 IST)
ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಬಿಸಿಸಿಐನ ಟಾಪ್ ಅಧಿಕಾರಿಗಳೆಲ್ಲಾ ಮನೆ ಸೇರಿದ್ದಾರೆ. ಕ್ರಿಕೆಟ್ ಆಡಳಿತ ನಡೆಸುವರೇ ಮನೆಯಲ್ಲಿರುವಾಗ ಮೈದಾನದ ಕ್ರಿಕೆಟ್ ವೇಳಾ ಪಟ್ಟಿಯ ಗತಿಯೇನು ಎಂಬ ಆತಂಕ ಕ್ರಿಕೆಟ್ ವಲಯದಲ್ಲಿದೆ.

ಮುಖ್ಯವಾಗಿ ಈಗ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳು ನಡೆಯುತ್ತಿದ್ದು, ಫೈನಲ್ ಪಂದ್ಯದ ವೇಳಾ ಪಟ್ಟಿ ನಿರ್ಧರಿಸಬೇಕಿದೆ. ಇದಲ್ಲದೆ, ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ,  ಏಪ್ರಿಲ್ ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಪೂರ್ವ ಭಾವಿ ಸಿದ್ಧತೆಗಳು ನಡೆಸಬೇಕಿದೆ. ಇದನ್ನೆಲ್ಲಾ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಆದರೆ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆಯಾಗದು ಎಂಬ ವಿಶ್ವಾಸ ಲೋಧಾ ಸಮಿತಿಯದ್ದು. ರಣಜಿ ಕ್ರಿಕೆಟ್ ಫೈನಲ್ ಹಂತ ತಲುಪಿದೆ. ಇನ್ನು, ಆಸ್ಟ್ರೇಲಿಯಾ ಸರಣಿಯ ವೇಳಾ ಪಟ್ಟಿ ಸಿದ್ಧವಾಗಿದೆ. ಹೀಗಾಗಿ ಇದಕ್ಕೆ ಯಾವುದೇ ತೊಂದರೆಯಾಗದು ಎಂಬುದು ಸಮಿತಿಯ ವಿಶ್ವಾಸ.

ಆದರೆ ಐಪಿಎಲ್ ವಿಷಯದಲ್ಲಿ ಹಾಗಲ್ಲ. ಅದರ ಪೂರ್ವ ಸಿದ್ಧತೆಗಳು ಇನ್ನೂ ಪ್ರಾರಂಭವಾಗಿಲ್ಲ. ಇದರಿಂದಾಗಿ ಐಪಿಎಲ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಆದರೆ ಆದಷ್ಟು ಬೇಗ ಕ್ರಿಕೆಟ್ ಸಂಸ್ಥೆಗೆ ಅಧಿಕಾರಿಗಳನ್ನು ನೇಮಿಸಿದರೆ ಕ್ರಿಕೆಟ್ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ಮುಂದಿನ ಸುದ್ದಿ
Show comments