Webdunia - Bharat's app for daily news and videos

Install App

ನಾವೇ ಗ್ರೇಟ್ ಎಂದು ಬೀಗುತ್ತಿದ್ದ ರವಿಶಾಸ್ತ್ರಿ, ಕೊಹ್ಲಿ ಜೋಡಿಗೆ ಗರ್ವಭಂಗ

Webdunia
ಬುಧವಾರ, 17 ಜನವರಿ 2018 (16:50 IST)
ಸೆಂಚೂರಿಯನ್: ದ.ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದುವರೆಗೆ ಇಂತಹ ತಂಡ ಭಾರತೀಯ ಕ್ರಿಕೆಟ್ ನಲ್ಲಿ ಇರಲಿಲ್ಲ. ಈ ತಂಡದಲ್ಲಿರುವವರೆಲ್ಲರೂ ಗೆಲುವಿಗಾಗಿಯೇ ಆಡೋದು ಎಂದು ಜಂಬದಿಂದಲೇ ಹೇಳಿಕೊಂಡಿದ್ದರು.
 

ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ತವರಿನಲ್ಲಿ ಅನುಭವಿಸಿದ ಯಶಸ್ಸಿನ ಅಲೆಯಲ್ಲಿ ದ.ಆಫ್ರಿಕಾ ವಿಮಾನವೇರಿದ್ದ ಟೀಂ ಇಂಡಿಯಾಗೆ ಸೋಲಿನ ಸ್ವಾಗತ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಸೋತಾಗ ಅಭಿಮಾನಿಗಳೂ ಟೀಂ ಇಂಡಿಯಾವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಎರಡನೇ ಟೆಸ್ಟ್ ನಲ್ಲೂ ಪ್ರದರ್ಶನ ಸುಧಾರಿಸಿಲ್ಲ. ಪರಿಣಾಮ ಹೀನಾಯ ಸೋಲು.

ಈ ಸರಣಿ ಸೋಲಿನೊಂದಿಗೆ ಟೀಂ ಇಂಡಿಯಾ ಹಲವು ಬೇಡದ ದಾಖಲೆಗಳನ್ನು ಮೈಮೇಲೆ ಹಾಕಿಕೊಂಡಿದೆ. 2015 ರಿಂದ ಕಳೆದ ಶ್ರೀಲಂಕಾ ಸರಣಿಯವರೆಗೆ ಎರಡು ವರ್ಷ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ. ಈಗ ಆ ಗೆಲುವಿನ ಸರಪಳಿ ಕಳಚಿಕೊಂಡಿದೆ. ಇದರೊಂದಿಗೆ ದ.ಆಫ್ರಿಕಾ ವಿರುದ್ಧ ಭಾರತ ಐದನೇ ಬಾರಿಗೆ ಟೆಸ್ಟ್ ಸರಣಿ ಸೋತಂತಾಗಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 135 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಕೇವಲ 100 ರನ್ ಗಳ ಅಂತರದಲ್ಲಿ 7 ಕ್ಕಿಂತ ಹೆಚ್ಚು ವಿಕೆಟ್ ಕಳೆದುಕೊಂಡ ಕುಖ್ಯಾತಿಗೆ ಇದು ಆರನೇ ಬಾರಿಗೆ ಒಳಗಾಯಿತು.  ಭಾರತದ ಚೇತೇಶ್ವರ ಪೂಜಾರ ಎರಡೂ ಇನಿಂಗ್ಸ್ ಗಳಲ್ಲಿ ರನೌಟ್ ಆಗುವ ಮೂಲಕ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್ ನಲ್ಲಿ ರನೌಟ್ ಆದ ಮೊದಲ ಭಾರತೀಯ ಎಂಬ ಕುಖ್ಯಾತಿಗೊಳಗಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

ವಿಚ್ಛೇದನ ಪಡೆದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಪ್ರತಿಭೆಯನ್ನು ಕೊಂಡಾಡಿದ ಆಪ್ತ ಗೆಳತಿ ಆರ್‌ಜೆ ಮಹ್ವಾಶ

IPL 2025: ತವರಿನಲ್ಲಿ ಕಡಿಮೆ ರನ್‌ ಮಾಡಿಯೂ ಗೆದ್ದುಬೀಗಿದ ಪಂಜಾಬ್‌ ಕಿಂಗ್ಸ್‌: ಕೋಲ್ಕತ್ತಕ್ಕೆ ಭಾರೀ ಮುಖಭಂಗ

IPL 2025: ತವರಿನ ಪ್ರೇಕ್ಷಕರ ಮುಂದೆ ಪರದಾಡಿದ ಪಂಜಾಬ್‌ ಬ್ಯಾಟರ್‌ಗಳು: ಕೆಕೆಆರ್‌ ಬೌಲರ್‌ಗಳ ಕರಾಮತ್ತು

Glenn Maxwell: ಮ್ಯಾಕ್ಸ್ ವೆಲ್ ರನ್ನು ಹರಾಜಿನಲ್ಲಿ ಕೈ ಬಿಟ್ಟಿದ್ದಕ್ಕೇ ಬಚಾವ್ ಎಂದ ಆರ್ ಸಿಬಿ ಫ್ಯಾನ್ಸ್

ಮುಂದಿನ ಸುದ್ದಿ
Show comments