ಭಾರತದ ಉಪನಾಯಕ ವಿರಾಟ್ ಕೊಹ್ಲಿ ಹಿರಿಯ ಪತ್ರಕರ್ತರೊಬ್ಬರ ಮೇಲೆ ಕೋಪದಿಂದ ದೂಷಿಸಿದ ಕುರಿತು ಐಸಿಸಿ ಮತ್ತು ಬಿಸಿಸಿಐಗೆ ವರದಿ ಮಾಡಲಾಗಿದೆ. ನಂತರ ಕೊಹ್ಲಿಗೆ ತಪ್ಪಿನ ಅರಿವಾಗಿ ತಾವು ದೂಷಿಸಿದ್ದು ಬೇರೆ ಪತ್ರಕರ್ತರಿಗೆ ಎಂದು ತಿಳಿದು ಕ್ಷಮಾಪಣೆ ಕೇಳಿದ್ದರು. ಟೀಂ ಮ್ಯಾನೇಜ್ಮೆಂಟ್ ಇದನ್ನು ತಪ್ಪುಭಾವನೆಯಿಂದ ಉಂಟಾದ ಘಟನೆ ಎಂದು ತಳ್ಳಿಹಾಕಿದೆ.
ಕೊಹ್ಲಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಭಾರತಕ್ಕೆ ವಿಶ್ವಕಪ್ ಅತೀ ಮುಖ್ಯವಾಗಿದೆ. ಬೇರೆಲ್ಲಾ ವಿಷಯವನ್ನು ಬದಿಗಿಟ್ಟು ವಿಶ್ವಕಪ್ ಕಡೆ ಗಮನಹರಿಸಲಾಗಿದೆ ಎಂದು ಅನುರಾಗ್ ಠಾಕುರ್ ತಿಳಿಸಿದ್ದಾರೆ.
ಆದರೆ ಕೊಹ್ಲಿಯಿಂದ ಉಗಿಸಿಕೊಂಡ ಹಿಂದುಸ್ತಾನ್ ಟೈಮ್ಸ್ ಪತ್ರಕರ್ತ ಜಸ್ವಂದಿರ್ ಸಿಂಧು ಐಸಿಸಿ ಮತ್ತು ಬಿಸಿಸಿಐಗೆ ಕೊಹ್ಲಿ ವಿರುದ್ಧ ದೂರು ನೀಡಿರುವುದರಿಂದ ಈ ವಿಷಯ ಇನ್ನೂ ತಣಿದುಹೋಗಿಲ್ಲ. ಸುದ್ದಿಪತ್ರಿಕೆ ಕೂಡ ಕೊಹ್ಲಿ ವರ್ತನೆ ವಿರುದ್ಧ ಕಾನೂನು ಕ್ರಮಕ್ಕೆ ಪರಿಶೀಲನೆ ನಡೆಸುತ್ತಿದ್ದು, ಕೊಹ್ಲಿ ಯಾವುದೇ ಕಾನೂನು ಉಲ್ಲಂಘಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.