Select Your Language

Notifications

webdunia
webdunia
webdunia
webdunia

ವಿನಯ್ ಕುಮಾರ್ ಬೌಲಿಂಗ್ ಆರ್ಭಟ: ಮುಂಬೈ 44 ರನ್‌ಗಳಿಗೆ ಆಲೌಟ್

ವಿನಯ್ ಕುಮಾರ್ ಬೌಲಿಂಗ್ ಆರ್ಭಟ:  ಮುಂಬೈ 44 ರನ್‌ಗಳಿಗೆ ಆಲೌಟ್
ಬೆಂಗಳೂರು , ಬುಧವಾರ, 25 ಫೆಬ್ರವರಿ 2015 (17:07 IST)
ಕರ್ನಾಟಕ ವಿರುದ್ಧ ರಣಜಿ ಟ್ರೋಫಿ ಸೆಮಿ ಫೈನಲ್  ಪಂದ್ಯದಲ್ಲಿ ಕೇವಲ 44 ರನ್‌‌ಗಳಿಗೆ ಮುಂಬೈ ತಂಡವನ್ನು ಕರ್ನಾಟಕ ಆಲೌಟ್ ಮಾಡಿದೆ. ಕರ್ನಾಟಕ ಮೊದಲಿಗೆ ಕೇವಲ 202 ರನ್‌ಗಳಿಗೆ ಕುಸಿದಿತ್ತು. ರಾಬಿನ್ ಉತ್ತಪ್ಪ ಕರ್ನಾಟಕ ಪರ 66 ರನ್ ಗಳಿಸಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿನಯಕುಮಾರ್  ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಮುಂಬೈ ತಂಡ ಕೇವಲ 44 ರನ್‌ಗೆ ಕುಸಿತ ಅನುಭವಿಸಿತು. ವಿನಯ್ ಕುಮಾರ್ ಅವರ ಬೌಲಿಂಗ್ ಆರ್ಭಟಕ್ಕೆ ಮುಂಬೈ ಆಟಗಾರರು ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿ ಹಿಡಿದರು.

ವಿನಯಕುಮಾರ್ 19 ರನ್ ನೀಡಿ 6 ಮುಂಬೈ ವಿಕೆಟ್‌ಗಳನ್ನು ಕಬಳಿಸಿ ಅಗ್ರಮಾನ್ಯ ಬೌಲರ್ ಎನಿಸಿಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 2 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದೆ. 

Share this Story:

Follow Webdunia kannada