Webdunia - Bharat's app for daily news and videos

Install App

ಗೆಲುವಿಗೆ ಎರಡು ರನ್ ಇದ್ದಾಗ ಊಟ ಮಾಡಿ ಬನ್ನಿ ಎಂದು ಕೊಹ್ಲಿ-ಧವನ್ ರನ್ನು ಪೆವಿಲಿಯನ್ ಗಟ್ಟಿದ ಅಂಪಾಯರ್!

Webdunia
ಸೋಮವಾರ, 5 ಫೆಬ್ರವರಿ 2018 (08:52 IST)
ಸೆಂಚೂರಿಯನ್: ಕ್ರಿಕೆಟ್ ನಲ್ಲಿ ಅದೆಷ್ಟೋ ತಮಾಷೆ, ಅಣಕಗಳು ನಡೆಯುತ್ತವೆ. ಅದಕ್ಕೆ ನಿನ್ನೆಯ ಭಾರತ-ದ.ಆಫ್ರಿಕಾ ಪಂದ್ಯ ಮತ್ತೊಂದು ಸೇರ್ಪಡೆಯಾಯಿತು. ಗೆಲುವಿಗೆ ಎರಡು ರನ್ ಬೇಕಾಗಿದ್ದಾಗ ಊಟದ ವಿರಾಮಕ್ಕೆ ಕರೆ ನೀಡಿ ಅಂಪಾಯರ್ ಗಳು ತಮಾಷೆಗೆ ಗ್ರಾಸವಾಗಿದ್ದಾರೆ.
 

ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ ಒಮದು ಇನಿಂಗ್ಸ್ ಮುಗಿದ ಬಳಿಕವಷ್ಟೇ ಲಂಚ್ ಅವರ್ ನೀಡಲಾಗುತ್ತದೆ. ಆದರೆ ನಿನ್ನೆ ಆಫ್ರಿಕಾ ಬೇಗನೇ ಆಲೌಟ್ ಆಗಿತ್ತು. ಭಾರತವೂ 18 ಓವರ್ ಗಳಲ್ಲೇ ಗುರಿ ಬಳಿಗೆ ಬಂದಿತ್ತು. ಅಂದರೆ ಸರಿಯಾಗಿ ಗೆಲುವಿಗೆ 2 ರನ್ ಇರುವಾಗ ನಿಯಮದ ಪ್ರಕಾರ ಊಟದ ವಿರಾಮವಾಗಿತ್ತು.

ಅಂಪಾಯರ್ ಗಳು ನಿಯಮ ಮೀರುವಂತಿಲ್ಲ ಎಂಬ ಕಾರಣಕ್ಕೆ ಊಟದ ವಿರಾಮ ಘೋಷಿಸಿಬಿಟ್ಟರು. ಕ್ರೀಸ್ ನಲ್ಲಿ ಕೊಹ್ಲಿ ಅಚ್ಚರಿಯಾಗಿ ಅಂಪಾಯರ್ ಗಳ ಜತೆ ಮಾತುಕತೆಗೆ ಮುಂದಾದರೂ ನಿಯಮ ಮುರಿಯುವಂತಿಲ್ಲ ಎಂದು ಅಂಪಾಯರ್ ಗಳು ಕೈ ಚೆಲ್ಲಿದರು.

ಇದು ಟ್ವಿಟರ್ ನಲ್ಲಿ ಭಾರೀ ಟ್ರೋಲ್ ಗೆ ಒಳಗಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂತೂ ಅಂಪಾಯರ್ ಗಳು ಬ್ಯಾಂಕ್ ನೌಕರರಂತೆ ಊಟ ಮಾಡಿ ಬನ್ನಿ ಅಂತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments