Webdunia - Bharat's app for daily news and videos

Install App

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಮೊದಲೇ ಟೀಂ ಇಂಡಿಯಾ ತಾಕತ್ತು ಬಯಲು!

Webdunia
ಶುಕ್ರವಾರ, 12 ಮೇ 2017 (07:16 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಭಾಗವಹಿಸುವುದು ನಿರ್ಧಾರವಾಗಿದ್ದು ಕೊನೆ ಗಳಿಗೆಯಲ್ಲಿ. ಆದರೂ ತಂಡದ ತಾಕತ್ತು ಏನೆಂದು ಐಸಿಸಿಗೂ ಮನವರಿಕೆಯಾಗಿದೆ.

 
ಭಾರತ ಆಡುವ ಲೀಗ್, ನಾಕೌಟ್, ಸೆಮೀಸ್ ಪಂದ್ಯಗಳ ಟಿಕೆಟ್ ಗಳೆಲ್ಲವೂ ಸೋಲ್ಡ್ ಔಟ್ ಆಗಿದೆ. ಆ ಮೂಲಕ ಆಯೋಜಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಅದೂ ಕೇವಲ ಒಂದೇ ವಾರದ ಅವಧಿಯಲ್ಲಿ ನಡೆದ ಮ್ಯಾಜಿಕ್ ಎನ್ನುವುದು ವಿಶೇಷ.

ಅದರಲ್ಲೂ ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇನ್ನೀಗ ಮೈದಾನದಲ್ಲಿ ಖರೀದಿಸಬಹುದಾದ ಟಿಕೆಟ್ ಅಷ್ಟೇ ಉಳಿದುಕೊಂಡಿದೆ. 2013 ರ ಚಾಂಪಿಯನ್ಸ್ ಟ್ರೋಫಿಗೆ ಹೋಲಿಸಿದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಆಡುವ ಪಂದ್ಯಗಳಿಗೆ ಡಿಮ್ಯಾಂಡ್ ಹೆಚ್ಚಿದೆ.

ಇತ್ತೀಚೆಗಷ್ಟೇ ತಾವು ಹೆಚ್ಚಿನ ಲಾಭ ತಂದುಕೊಡುವುದರಿಂದ ಹಣಕಾಸಿನ ಪಾಲು ನಮಗೆ ಹೆಚ್ಚು ಸಿಗಬೇಕು ಎಂಬ ಭಾರತೀಯ ಕ್ರಿಕೆಟ್ ಮಂಡಳಿ ಬೇಡಿಕೆಗೆ ಐಸಿಸಿ ಹಾಗೂ ಇತರ ಸದಸ್ಯ ರಾಷ್ಟ್ರಗಳು ನಕಾರ ವ್ಯಕ್ತಪಡಿಸಿದ್ದವು. ಇದನ್ನು ವಿರೋಧಿಸಿ ಭಾರತ ಟೂರ್ನಿ ಬಹಿಷ್ಕರಿಸುವ ಬೆದರಿಕೆ ಒಡ್ಡಿತ್ತು. ಅದರ ಬೆನ್ನಲ್ಲೇ ಭಾರತದ ಪಂದ್ಯಗಳಿಗೆ ಈ ಮಟ್ಟಿಗೆ ಬೆಂಬಲ ಸಿಕ್ಕಿರುವುದು ಬಿಸಿಸಿಐಗೆ ಬಲ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

ಮುಂದಿನ ಸುದ್ದಿ
Show comments