ಟೀಂ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಗಳು ಬೇಕಾಗಿದ್ದಾರೆ!

Webdunia
ಭಾನುವಾರ, 12 ಸೆಪ್ಟಂಬರ್ 2021 (12:33 IST)
ಲಂಡನ್: ಇತ್ತೀಚೆಗೆ ಟೀಂ ಇಂಡಿಯಾ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮತ್ತೊಂದು ತಂಡವನ್ನು ಏಕಕಾಲಕ್ಕೆ ಆಡಿಸುವಷ್ಟು ಸಾಮರ್ಥ್ಯ ಹೊಂದಿದೆ. ಯಾಕೆಂದರೆ ಸೀಮಿತ ಓವರ್ ಗಳಲ್ಲಿ ಎರಡು ತಂಡಗಳಿಗಾಗುವಷ್ಟು ಪ್ರತಿಭಾವಂತರು ಭಾರತದಲ್ಲಿದ್ದಾರೆ.


ಆದರೆ ಟೆಸ್ಟ್ ತಂಡದಲ್ಲಿ ಆ ಪರಿಸ್ಥಿತಿಯಿಲ್ಲ. ಹೀಗಾಗಿಯೇ ಫಾರ್ಮ್ ಕೊರತೆಯಿದ್ದರೂ ಭಾರತ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಮತ್ತಿತರರನ್ನೇ ಅವಲಂಬಿಸಿದೆ.

ಹೀಗಾಗಿ ಟೀಂ ಇಂಡಿಯಾ ತುರ್ತಾಗಿ ಟೆಸ್ಟ್ ಕ್ರಿಕೆಟ್ ಗೆ ತಜ್ಞ ಆಟಗಾರರನ್ನು ಹುಟ್ಟುಹಾಕುವ ಅಗತ್ಯವಿದೆ. ಸೀಮಿತ ಓವರ್ ಗಳಲ್ಲಿ ಐಪಿಎಲ್ ಆಡಿದ ಅನುಭವದ ಮೇಲೆ ಅವಕಾಶ ಪಡೆಯುವ ಕ್ರಿಕೆಟಿಗರು ರನ್ ಗಳಿಸಿ ಗೆಲುವು ಕೊಡಿಸುತ್ತಾರೆ. ಆದರೆ ಈ ಕ್ರಿಕೆಟಿಗರಿಗೆ ಹೊಡೆಬಡಿಯ ಕ್ರಿಕೆಟ್ ಅಭ್ಯಾಸವಾಗಿರುತ್ತದೆ.

ಇತ್ತೀಚೆಗೆ ಕೊರೋನಾದಿಂದಾಗಿ ರಣಜಿ ಕ್ರಿಕೆಟ್ ಪಂದ್ಯಗಳೂ ನಡೆಯುತ್ತಿಲ್ಲ. ಇದರಿಂದಾಗಿ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಹ ನಿಂತು, ತಾಳ್ಮೆಯಿಂದ ಆಡುವ, ತಾಂತ್ರಿಕವಾಗಿ ಸುಧಾರಿತ ಬ್ಯಾಟ್ಸ್ ಮನ್ ಗಳು ಸಿಗುತ್ತಿಲ್ಲ. ಇದು ಭಾರತ ಟೆಸ್ಟ್ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಆರಂಭ ಉತ್ತಮವಾಗಿದ್ದರೂ ದಿಡೀರ್ ಬ್ಯಾಟಿಂಗ್ ಕುಸಿತವಾಗುತ್ತಿರುವುದು ಇದಕ್ಕೆ ನಿದರ್ಶನ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಮುಂದೆಯೂ ಯಶಸ್ವಿಯಾಗಬೇಕಾದರೆ ಸ್ಪೆಷಲಿಸ್ಟ್ ಗಳನ್ನು ಹುಟ್ಟುಹಾಕುವುದು ಅನಿವಾರ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 World Cup: ಅಬ್ಬರಿಸಿದ ಅಭಿಷೇಕ್‌, ತಿಲಕ್, ಹಾರ್ದಿಕ್, ಜಿಂಬಾಬ್ವೆಗೆ ಬಿಗ್ ಟಾರ್ಗೆಟ್

Ranji Trophy Final: ಮಯಾಂಕ್ ಅಗರ್ವಾಲ್ ಇಂದು ಶತಕ ಸಿಡಿಸಿದ್ದಕ್ಕೆ ಕರ್ನಾಟಕ ಬಚಾವ್

Ranji Trophy Final: ರಣಜಿ ಫೈನಲ್ ನಲ್ಲಿ ಕೈಕೊಟ್ಟ ಬಿಗ್ ಥ್ರೀ: ಜಮ್ಮು ಎದುರು ಕರ್ನಾಟಕ ಹಳಿ ತಪ್ಪಿದ ರೈಲು

T20 WC: ಟೀಂ ಇಂಡಿಯಾಗೆ ಇಂದು ಜಿಂಬಾಬ್ವೆ ವಿರುದ್ಧ ಮ್ಯಾಚ್: ಕರೆಕ್ಟ್ ಟೀಂ ಸೆಲೆಕ್ಟ್ ಮಾಡಿ ಅಂತಿದ್ದಾರೆ ಫ್ಯಾನ್ಸ್

ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ಫೀಲ್ಡರ್‌ಗೆ ಹೆಲ್ಮೆಟ್‌ನಿಂದಲೇ ಡಿಜ್ಜಿ ಕೊಟ್ಟ ಜಮ್ಮು ನಾಯಕ, Video

ಮುಂದಿನ ಸುದ್ದಿ
Show comments