Webdunia - Bharat's app for daily news and videos

Install App

ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

Webdunia
ಭಾನುವಾರ, 19 ಮಾರ್ಚ್ 2017 (16:40 IST)
ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ  ಗಳಿಸಿದರು. ವೃದ್ಧಿಮಾನ್ ಸಹಾ ಶತಕ ಗಳಿಸಿದರು. ಆದರೂ ಗೆಲ್ಲಬೇಕಾದರೆ ರವೀಂದ್ರ ಜಡೇಜಾನೇ ಬೇಕು ಎಂದು ಮತ್ತೊಮ್ಮೆ ಸಾಬೀತಾಯಿತು.

 

 ಭಾರತದ ಮೊದಲ ಇನಿಂಗ್ಸ್ ನಲ್ಲಿ ಪೂಜಾರ (202),  ಸಹಾ (117) ಗಳಿಸಿ ತಂಡವನ್ನು ಸುರಕ್ಷಿತಗೊಳಿಸಿದರು. ಆದರೆ ಕೊನೆಯಲ್ಲಿ ಬಂದ ಜಡೇಜಾ ಬೀಡು ಬೀಸಾಗಿ ಬ್ಯಾಟ್ ಬೀಸಿ ವೇಗದ ಅರ್ಧಶತಕ ಗಳಿಸಿದ್ದರಿಂದ ಟೀಂ ಇಂಡಿಯಾ ಮೊತ್ತ 602 ಕ್ಕೆ ತಲುಪಿತು. 9 ವಿಕೆಟ್ ಗೆ 602 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡ ಭಾರತ ಮಹತ್ವದ 152 ರನ್ ಮುನ್ನಡೆ ಸಾಧಿಸಿತು.

 

ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಅಪಾಯಕಾರಿ ಡೇವಿಡ್ ವಾರ್ನರ್ ರನ್ನು ಮತ್ತೊಮ್ಮೆ ತಮ್ಮ ಬಲೆಗೆ ಕೆಡವಿದ ಜಡೇಜಾ ನೈಟ್ ವಾಚ್ ಮನ್ ನಥನ್ ಲಯಾನ್ ವಿಕೆಟ್ ಕೂಡಾ ಕಬಳಿಸಿ ಗೆಲುವಿನ ಆಸೆ ಚಿಗುರಿಸಿದ್ದಾರೆ. ಹಿಂದೊಮ್ಮೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಜಡೇಜಾ ಇದೇ ರೀತಿ ಅಸಾಧ್ಯವಾಗಿದ್ದ ಪಂದ್ಯವನ್ನು ಕೊನೆಯ ದಿನ ಟೀಂ ಇಂಡಿಯಾ ತೆಕ್ಕೆಗೆ ಬೀಳುವಂತೆ ಮಾಡಿದ್ದರು.

 
ಈ ಪಂದ್ಯದಲ್ಲೂ ಅದೇ ರೀತಿ ಎದುರಾಳಿಗಳನ್ನು ತಮ್ಮ ಬಲೆಗೆ ಕೆಡವಿ ಪಂದ್ಯ ಗೆದ್ದುಕೊಡುತ್ತಾರಾ ಎಂದು ನಾಳೆಯವರೆಗೆ ಕಾದು ನೋಡಬೇಕು.  ಈ ನಡುವೆ ತಮ್ಮ ದ್ವಿಶತಕ ಗಳಿಸಲು 525 ಬಾಲ್ ಎದುರಿಸಿದ ಪೂಜಾರ ಅತೀ ಹೆಚ್ಚು ಎಸೆತ ಎದುರಿಸಿದ ದಾಖಲೆಯನ್ನೂ ಮಾಡಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ICC ODI Rankings:No.1 ಬ್ಯಾಟರ್ ಪಟ್ಟಕೇರಿದ ಸ್ಮೃತಿ ಮಂಧಾನ

Virat Kohli: ಲಂಡನ್ ನಲ್ಲಿ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಸರ್ಪೈಸ್

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

ಮುಂದಿನ ಸುದ್ದಿ
Show comments