Webdunia - Bharat's app for daily news and videos

Install App

ಬಿಸಿಸಿಐ-ಐಸಿಸಿ ತಿಕ್ಕಾಟಕ್ಕೆ ಟೀಂ ಇಂಡಿಯಾ ಬಲಿ

Webdunia
ಬುಧವಾರ, 26 ಏಪ್ರಿಲ್ 2017 (07:06 IST)
ಮುಂಬೈ: ಹಣಕಾಸಿನ ವಿಚಾರಕ್ಕೆ ಸಂಬಂದಿಸಿದಂತೆ ಬಿಸಿಸಿಐ ಮತ್ತು ಐಸಿಸಿ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಟೀಂ ಇಂಡಿಯಾ ಮತ್ತು ಭಾರತ ಕ್ರಿಕೆಟ್ ಅಭಿಮಾನಿಗಳು ಬಲಿಯಾಗುತ್ತಿದ್ದಾರೆ.

 
ಹಣಕಾಸಿನ ಪಾಲುದಾರಿಕೆಯಲ್ಲಿ ಹೆಚ್ಚು ಲಾಭ ತಂದುಕೊಡುತ್ತಿರುವ ಸಂಸ್ಥೆಗಳಿಗೆ ಹೆಚ್ಚು ಪಾಲು ಕೊಡಬೇಕೆಂಬ ಬಿಸಿಸಿಐ ವಾದವನ್ನು ಐಸಿಸಿ ಒಪ್ಪುತ್ತಿಲ್ಲ. ಐಸಿಸಿ ಒಪ್ಪದ ಹೊರತು ತಾನು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.

ಎಲ್ಲವೂ ಸರಿಯಾಗಿದ್ದರೆ ಇಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ನಡೆಯಬೇಕಿತ್ತು. ಆದರೆ ಬಿಸಿಸಿಐ ಬಿಗು ನಿಲುವಿನಿಂದಾಗಿ ಟೀಂ ಇಂಡಿಯಾ ಆಯ್ಕೆಯನ್ನು ಕಾದಿರಿಸಲಾಗಿದೆ. ಈ ನಡುವೆ ಐಸಿಸಿ ಹೆಚ್ಚುವರಿ 100 ಮಿಲಿಯನ್ ಡಾಲರ್ ನೀಡುವುದಾಗಿ ಹೇಳಿದರೂ ಅದಕ್ಕೆ ಬಿಸಿಸಿಐ ಒಪ್ಪಿಲ್ಲ.

ಬಿಸಿಸಿಐಗೆ ಪ್ರಸಕ್ತ 579 ಮಿಲಿಯನ್ ಅಮೆರಿಕನ್ ಡಾಲರ್ ಸಿಗುತ್ತಿದೆ. ಹೊಸ ಆರ್ಥಿಕ ನೀತಿ ಜಾರಿಗೆ ಬಂದರೆ ವಾರ್ಷಿಕ 290 ಮಿಲಿಯನ್ ಡಾಲರ್ ನಷ್ಟು ಮಾತ್ರ ಲಾಭಾಂಶ ಸಿಗುವುದು. ಆದರೆ ಐಸಿಸಿಯ ವರಸೆಗೆ ಬಿಸಿಸಿಐ ಒಪ್ಪುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ತವರಿನಲ್ಲಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌: ಸನ್‌ರೈಸರ್ಸ್‌ಗೆ ಮುಖಭಂಗ

IPL 2025: ಮಿಂಚಿದ ಅಭಿಷೇಕ್‌ ಶರ್ಮಾ, ಕ್ಲಾಸೆನ್‌: ಮುಂಬೈ ಗೆಲುವಿಗೆ 163 ರನ್‌ ಗುರಿ ನೀಡಿದ ಹೈದರಾಬಾದ್‌

IPL 2025: ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ: ವಾಂಖೆಡೆಯಲ್ಲಿ ರನ್‌ ಮಳೆಯ ನಿರೀಕ್ಷೆ

IPL 2025: ನಾಳೆ ತವರಿನಲ್ಲಿ ಪಂಜಾಬ್ ಎದುರಿಸಲಿರುವ ಆರ್‌ಸಿಬಿ, ಟೆನ್ಷನ್‌ನಲ್ಲಿ ಅಭಿಮಾನಿಗಳು

IPL 2025 Today Prediction:ಇಂದು ಮುಂಬೈ ಇಂಡಿಯನ್ಸ್‌- ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿ, ಇವರಿಗೆ ಗೆಲುವು ಪಕ್ಕಾ

ಮುಂದಿನ ಸುದ್ದಿ
Show comments