Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಸಿಕ್ಸರ್ ಹೊಡೆತಕ್ಕೆ ಆಸ್ಪತ್ರೆ ಸೇರಿದ ಬಾಲಕ

ಸುರೇಶ್ ರೈನಾ ಸಿಕ್ಸರ್ ಹೊಡೆತಕ್ಕೆ ಆಸ್ಪತ್ರೆ ಸೇರಿದ ಬಾಲಕ
ಬೆಂಗಳೂರು , ಶುಕ್ರವಾರ, 3 ಫೆಬ್ರವರಿ 2017 (10:49 IST)
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಹೊಡೆಯುತ್ತಿದ್ದ ಬಾಲ್ ಗಳು ನೇರ ಪ್ರೇಕ್ಷಕರ ನಡುವೆ ಬೀಳುತ್ತಿತ್ತು. ಹೀಗೆ ಬಿದ್ದ ಬಾಲ್ ಒಂದು ಬಾಲಕನೊಬ್ಬನನ್ನು ಆಸ್ಪತ್ರೆಗೆ ಸೇರಿಸಿದೆ.

 
ಸುರೇಶ್ ರೈನಾ ಹೊಡೆದ ಬಾಲ್ ಒಂದು ಬೌಂಡರಿ ಗೆರೆ ಬಳಿಯಿದ್ದ ಬಾಲಕನಿಗೆ ಬಡಿದು ಆತ ಗಾಯಗೊಂಡಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ವೈದ್ಯಕೀಯ ಕೇಂದ್ರದಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಯಿತು.

ವಿಶೇಷವೆಂದರೆ ಚಿಕಿತ್ಸೆ ಪಡೆದ ಬಳಿಕ ಬಾಲಕ ಮತ್ತೆ ಮೈದಾನಕ್ಕೆ ಮರಳಿ ಪಂದ್ಯ ವೀಕ್ಷಿಸಿದ್ದಾನೆ. ಸತೀಶ್ ಎಂದು  ಈ ಬಾಲಕನ ಹೆಸರು. ಆತ ನೋವಾಗುತ್ತಿರುವುದಾಗಿ ಹೇಳಿದ್ದ. ಆದರೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಮತ್ತೆ ಪಂದ್ಯ ನೋಡಲು ಬಿಡಿ ಎಂದು ಮನವಿ ಮಾಡಿಕೊಂಡ  ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವೈದ್ಯಕೀಯ ಕೇಂದ್ರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೂರ್ತಿದಾಯಕ ಕ್ಯಾಪ್ಟನ್ ಕೂಲ್ ಧೋನಿಗೆ ಟೀಂ ಇಂಡಿಯಾ ಸನ್ಮಾನ ಮಾಡಿದ ರೀತಿಯಿದು