ಭಾರತ ತಂಡದ ಬ್ಯಾಟ್ಸ್ಮನ್ ಸುರೇಶ್ ರೈನಾ ಸೋಮವಾರ ಕ್ರಿಕೆಟರ್ಗಳ ರಕ್ಷಣೆಗೆ ನಿಂತಿದ್ದು, ಸ್ಪಾಟ್ ಫಿಕ್ಸಿಂಗ್ನಲ್ಲಿ ಯಾವುದೇ ಕ್ರಿಕೆಟರ್ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳಿದರು.
ತಮ್ಮ ಪತ್ನಿ ಪ್ರಿಯಾಂಕಾ ಜೊತೆ ಬಾಮ್ನೌಲಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿದ್ದ ಸುರೇಶ್ ರೈನಾ ದೆಹಲಿ ಕೋರ್ಟ್ ಇತ್ತೀಚೆಗೆ ಕ್ರಿಕೆಟರ್ಗಳಾದ ಎಸ್.ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೋಷಮುಕ್ತಿಗೊಳಿಸಿದ ತೀರ್ಪಿನ ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರೈನಾ, ಇಂತಹ ವಿಷಯಗಳಲ್ಲಿ ಕ್ರಿಕೆಟರ್ಗಳ ಯಾವುದೇ ಪಾತ್ರವಿಲ್ಲ. ಆದ್ದರಿಂದ ಈ ಆರೋಪಗಳು ಅವರ ನೈತಿಕ ಸ್ಥೈರ್ಯ ಕುಂದಿಸುವುದಿಲ್ಲ ಎಂದು ರೈನಾ ಹೇಳಿದರು.
ಗ್ರಾಮದ ನಾಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ನೂತನ ದಂಪತಿ, ಭವಿಷ್ಯದಲ್ಲಿ ಭಾರತ ತಂಡದ ಸಾರಥ್ಯವನ್ನು ವಹಿಸಿಕೊಳ್ಳುವ ಸಾಧ್ಯತೆಗಳನ್ನು ಕೂಡ ತಳ್ಳಿಹಾಕಿಲ್ಲ.