Webdunia - Bharat's app for daily news and videos

Install App

ದೆಹಲಿ ಕೋರ್ಟ್‌ನಿಂದ ಕ್ಲೀನ್ ಚಿಟ್ ಬಳಿಕ ಶ್ರೀಶಾಂತ್ ನೆಟ್ ಅಭ್ಯಾಸ

Webdunia
ಸೋಮವಾರ, 27 ಜುಲೈ 2015 (13:38 IST)
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ಶ್ರೀಶಾಂತ್ ನೆಟ್ ಎಡಾಪಲ್ಲಿ ಶಾಲಾ ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ.  ಶ್ರೀಶಾಂತ್ ಸೇರಿದಂತೆ ಅಂಕಿತ್ ಚವ್ಹಾಣ್, ಅಜಿತ್ ಚಾಂಡಿಲಾ ಸೇರಿದಂತೆ ಎಲ್ಲಾ 36 ಆರೋಪಿಗಳನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟಿಯಾಲಾ ಹೌಸ್ ಕೋರ್ಟ್ ದೋಷಮುಕ್ತಿಗೊಳಿಸಿದೆ. 
 
ಕೋರ್ಟ್ ತೀರ್ಪಿನ ಬಳಿಕವು ಬಿಸಿಸಿಐ ಶ್ರೀಶಾಂತ್ ವಿರುದ್ಧದ ನಿಷೇಧದ ನಿರ್ಧಾರವನ್ನು ಬದಲಿಸಲು ನಿರಾಕರಿಸಿದೆ. ಆದರೆ ಶ್ರೀಶಾಂತ್ ಪುನಃ ಸ್ಪರ್ಧಾತ್ಮಕ ಕ್ರಿಕೆಟ್‌‌ಗೆ ಕಮ್‌ಬ್ಯಾತ್ ಆಗಲು ಬಿಸಿಸಿಐಗೆ ತಮ್ಮ ಫಿಟ್ನೆಸ್ ತೋರಿಸಲು ಉತ್ಸುಕರಾಗಿದ್ದಾರೆ. ಅಭ್ಯಾಸಕ್ಕಾಗಿ ಸಂಜೆ ಅವರು ಮೈದಾನಕ್ಕೆ ಮುಟ್ಟಿದಾಗ ಅವರ ಅಭಿಮಾನಿಗಳು ಅವರಿಗೆ ಹಾರ್ದಿಕ ಸ್ವಾಗತ ನೀಡಿದರು. 
 
ಅವರ ಮಾರ್ಗದರ್ಶಿ ಶಿವಕುಮಾರ್ ನೆಟ್‌‍ನಲ್ಲಿ ಶ್ರೀಶಾಂತ್ ಅವರ ಕೆಲವು ಎಸೆತಗಳನ್ನು ಎದುರಿಸಿದರು.  ನಿಷೇಧದಿಂದಾಗಿ ಕೇರಳ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಡಲು ಅವಕಾಶ ಸಿಗದ ಶ್ರೀಶಾಂತ್ ತಮ್ಮ ಬಾಲ್ಯದ ದಿನಗಳಲ್ಲಿ ತನ್ನ ತಂದೆ ಶಾಂತಕುಮಾರನ್ ನಾಯರ್ ಮತ್ತು ಶಿವಕುಮಾರ್ ಜೊತೆ ಅಭ್ಯಾಸ ನಡೆಸಿದ್ದ ಶಾಲಾ ಮೈದಾನದಲ್ಲಿ ಆಡುವಾಗ ಹಳೆಯ ನೆನಪುಗಳು ಸುಳಿದು ಭಾವುಕರಾದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments